ಪ್ರೇಕ್ಷಕರನ್ನು ಸೆರೆಹಿಡಿದ "ದ್ವಂದ್ವ ಗಾಯನ"

VK NEWS
By -
0

ಬೆಂಗಳೂರು : ವಸಂತ ನವರಾತ್ರಿ ಶ್ರೀರಾಮ ನವಮಿ ಉತ್ಸವದ ಅಂಗವಾಗಿ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ 12, ಶುಕ್ರವಾರ ಸಂಜೆ ಏರ್ಪಡಿಸಿದ್ದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮದಲ್ಲಿ ಕುಮಾರಿಯರಾದ ಪ್ರಣೀತಾ ಟಿ. ಮಣೂರ್ ಮತ್ತು ಸುಶ್ರಾವ್ಯ ಆಚಾರ್ಯ ಇವರುಗಳು ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ಅಪರೂಪದ ಹರಿದಾಸರ ಕೃತಿಗಳನ್ನೂ, ಶ್ರೀ ಅನ್ನಮಾಚಾರ್ಯರ ಕೀರ್ತನೆಗಳನ್ನೂ ಹಾಗೂ ಶ್ರೀ ತ್ಯಾಗರಾಜರ ಕೀರ್ತನೆಗಳನ್ನೂ ಪ್ರಸ್ತುತ ಪಡಿಸಿದರು. 

ಇವರ ಗಾಯನಕ್ಕೆ ಶ್ರೀ ಎಂ.ಎನ್. ಸತ್ಯನಾರಾಯಣ ಪಿಟೀಲು ವಾದನದಲ್ಲಿ ಮತ್ತು ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು.

Post a Comment

0Comments

Post a Comment (0)