ಪುಟ್ಟಣ ಕಣಗಾಲ್ ನಿರ್ದೇಶನದ1971ರಲ್ಲಿ ಬಿಡುಗಡೆಯಾದ ಶರಪಂಜರಚಿತ್ರದ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ..ಹಾಡು ಇಂದಿಗೂ ಅಮರವಾಗಿದೆ. ಈ ಹಾಡಿನಗುಂಗಿನಲ್ಲೇ ನಾವು ಬಿಳಿಗಿರಿ ರಂಗನ ಬೆಟ್ಟ ಹತ್ತುವಷ್ಟರಲ್ಲಿ ಹತ್ತೂವರೆಆಗಿತ್ತು. ಬಸ್ಸು ಬೆಟ್ಟ ಹತ್ತಿ ಬುಸ್ಎಂದು ಹೊಗೆಯಾಡಿತು. ಬಸ್ಸಿನ ಟ್ಯಾಂಕ್ನಲ್ಲಿ ನೀರುಕಡಿಮೆಯಾಗಿ ಹೊಗೆಯಾಡಿದ್ದುಖರೆ. ಯಾರೋ ಪುಣ್ಯಾತ್ಮರು ಈ ಕಡೆದೇವಸ್ಥಾನಕ್ಕೆ ಮೆಟ್ಟಿಲು ಜಾಸ್ತಿ. ನೀವು ಆ ಕಡೆ ರಸ್ತೆಯಲ್ಲಿ ಬಸ್ಸಿನಲ್ಲೇ ದೇವಸ್ಥಾನದ ಬಳಿಗೆ ಹೋಗಬಹುದು..ಎಂದುಅತ್ತ ಕೈ ತೋರಿದರು. ಅದುಕಡಿದಾದ ತಿರುವುಗಳ ರಸ್ತೆ. ಬ್ರೇಕ್ ಹಿಡಿದು ಡ್ರೈವರ್ ಬಸ್ಸನ್ನು ಮೇಲಕ್ಕೆ ನಿಧಾನವಾಗಿ ಹತ್ತಿಸುತ್ತಿರಲು ನಾವು ಉಸಿರು ಬಿಗಿ ಹಿಡಿದುತಗ್ಗಿನ ವನಸಿರಿ ನೋಡಿದೆವು.ಇಲ್ಲಿ ಬಸ್ಸಿನಿಂದ ಇಳಿದ ಕೂಡಲೇ ಬೋಳುಮರ ಕಾಣಿಸಿ ಬೆಳ್ಳಿಮೋಡ ಚಿತ್ರ ನೆನಯಿತು. ಮಡದಿ ಶಕುಂತಲೆ ಮತ್ತು ಅವರಕ್ಕರನ್ನು ಅಕ್ಕಪಕ್ಕ ನಿಲ್ಲಿಸಿ ಬಿಳಿಗಿರಿ ಬೆಟ್ಟದತಪ್ಪಲಿನ ದೃಶ್ಯ ಸೆರೆ ಹಿಡಿದೆ. ಬಿಳಿಯ ಮಂಜು ಬೆಳ್ಳಿಯ ಮೋಡಗಳಿಂದ ವರ್ಷದ ಹೆಚ್ಚಿನ ಭಾಗವು ಈ ಬೆಟ್ಟವನ್ನುಆವರಿಸುವುದುವಿಶೇಷವಾಗಿದೆ.
ತಮಿಳುನಾಡಿನ ಈರೋಡುಜಿಲ್ಲೆಯಗಡಿಯಲ್ಲಿ ನೈಋತ್ಯಕರ್ನಾಟಕದಲ್ಲಿ ನೆಲೆಗೊಂಡಿರುವ ಬೆಟ್ಟ ಶ್ರೇಣಿಯ ಭೂ ವಲಯವನ್ನು ಬಿಳಿಗಿರಿರಂಗನಾಥಸ್ವಾಮಿದೇವಾಲಯ ವನ್ಯಜೀವಿ ಅಭಯಾರಣ್ಯಎಂದುಕರೆಯಲಾಗಿದೆ. 322.4 ಚದರ ಕಿ.ಮೀ.ವನ್ಯಜೀವಿ ಅಭಯಾರಣ್ಯವನ್ನುದೇವಾಲಯ ಸುತ್ತಲೂ 1974ರಲ್ಲಿ ರಚಿಸಿ, 1987ರಲ್ಲಿ 539.52 ಚದರ ಕಿ.ಮೀ.ಗೆ ವಿಸ್ತರಿಸಿದಅಭಯಾರಣ್ಯಕ್ಕೆ ಬಿಳಿಗಿರಿ ಎಂಬ ಹೆಸರುಚಾಲ್ತಿಯಲ್ಲಿದೆ. ಇದು 1972ರ ವನ್ಯಜೀವಿ ಸಂರಕ್ಷಣೆಕಾಯ್ದೆ ಅಡಿ ಸಂರಕ್ಷಿತ ಮೀಸಲು ಪ್ರದೇಶ. 2011ರಲ್ಲಿ ಹುಲಿ ಸಂರಕ್ಷಿತಪ್ರದೇಶವೆಂದುಘೋಷಿಸಲ್ಪಟ್ಟಿದೆ. ಬೆಟ್ಟಗಳ ಸಾಲು ಯಳಂದೂರು ಕೊಳ್ಳೆಗಾಲಚಾಮರಾಜನಗರ ತಾಲ್ಲೂಕುಗಳಲ್ಲಿ ವ್ಯಾಪಿಸಿದೆ. ಅವು ದಕ್ಷಿಣಕ್ಕೆಈರೋಡ್ಜಿಲ್ಲೆಯ ಸತ್ಯಮಂಗಲ ವನ್ಯಜೀವಿ ಅಭಯಾರಣ್ಯದ ಬೆಟ್ಟಗಳೊಂದಿಗೆ ಹೊಂದಿಕೊಂಡಿವೆ. ಬೆಟ್ಟ ಶ್ರೇಣಿ 800 ಜಾತಿಯ ಸಸ್ಯಗಳನ್ನು ಹೊಂದಿದೆ. ಕಾಡಿನ ಪ್ರಯಾಣದುದ್ದಕ್ಕೂ ಮರಗಿಡಗಳು ಒಣಗಿ ನಿಂತಿದ್ದವು. ಅಲ್ಲಲ್ಲಿ ಸ್ವಲ್ಪ ಹಸಿರು ಚಿಗುರುತ್ತಿರುವ ಮರಗಿಡಗಳು ಕಂಡವು. ಎರಡ್ಮೂರು ಕೆರೆಗಳು ಕಂಡೆವಾದರೂ ಅವು ಬತ್ತುತ್ತಾ ಬಂದು ಸ್ವಲ್ಪವೇ ನೀರಿರುವ ಕೆರೆಗಳಿಗೆ ಜಿಂಕೆಗಳೇನಾದರೂ ಬರುತ್ತವೆಯೇ? ಎಂಬ ನಮ್ಮ ನಿರೀಕ್ಷೆ ಫಲಿಸಿತು. ನಾವು ವಾಪಸ್ಸು ಬರುವಾಗ ಮೂರು ಜಿಂಕೆಗಳು ನೀರುಕುಡಿಯಲು ಬರುತ್ತಿದ್ದವು. ಈ ವನ್ಯಜೀವಿ ಪ್ರದೇಶದಲ್ಲಿ 26 ಜಾತಿಯ ಸಸ್ತನಿಗಳು ದಾಖಲಾಗಿವೆ. ಸಸ್ತನಿಗಳಲ್ಲಿ ಸಾಂಬರ್, ಚಿತಾಲ್, ಬೊಗಳುವ ಜಿಂಕೆಗಳು, ನಾಲ್ಕು ಕೊಂಬಿನ ಹುಲ್ಲೆ, ಹುಲಿ, ಚಿರತೆ, ಕಾಡುನಾಯಿ, ಬೆಕ್ಕು, ಕರಡಿಗಳು ಸೇರಿವೆ. ವೃಕ್ಷದ ಸಸ್ತನಿಗಳು ದೈತ್ಯ ಹಾರುವ ಅಳಿಲು ಸೇರಿದಂತೆ 3 ಜಾತಿಯ ಅಳಿಲುಗಳನ್ನು ದಾಖಲಿಸಲಾಗಿದೆ. 254 ಜಾತ್ರಿಯ ಪಕ್ಷಿಗಳಿವೆಯಂತೆ.
ದೇವಸ್ಥಾನವು ಸಾಕಷ್ಟು ವಿಸ್ತಾರದಕಲ್ಲುಹಾಸಿನ ನಡುವೆ ನೆಲೆಗೊಂಡಿದೆ. ಗರ್ಭಗುಡಿಯಲ್ಲಿ 5 ಅಡಿ ಎತ್ತರದ ಭಗವಾನ್ರಂಗನಾಥಸ್ವಾಮಿಯ ವಿಗ್ರಹವು ನಿಂತಭಂಗಿಯಲ್ಲಿದೆ. ಶರಪಂಜರಚಿತ್ರದ ಹಾಡಿಗೆತಕ್ಕಂತೆ‘ಶ್ರೀರಂಗನ ಬೆಟ್ಟದ ಚಂದುಳ್ಳಿ ಚೆಲುವಯ್ಯ..ಸುಂದರವಾಗಿದೆ.ಬಲಭಾಗರಂಗನಾಯಕಿಅಮ್ಮನಗುಡಿ ಪ್ರತ್ಯೇಕವಾಗಿದೆ. ದಂತಕಥೆಯಂತೆ ವಶಿಷ್ಟರು ಇಲ್ಲಿತಪಸ್ಸು ಮಾಡಿ ಭಗವಂತಅವರಿಗೆ ಕಾಣಿಸಿಕೊಂಡು ಆಶೀರ್ವದಿಸಿರಂಗನಾಥಸ್ವಾಮಿ ಮೂಲ ಪ್ರತಿಮೆಯನ್ನು ವಶಿಷ್ಠರು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ದೇವಾಲಯದಲ್ಲಿ ಒಂದುದೊಡ್ಡಜೋಡಿ ಚಪ್ಪಲಿಯನ್ನುಇಡಲಾಗಿದೆ. ಭಗವಂತನು ಇವುಗಳನ್ನು ಧರಿಸಿರಾತ್ರಿಕಾಡಿನಲ್ಲಿತಿರುಗಾಡುತ್ತಾನೆ ಎಂಬ ನಂಬಿಕೆ ಇದೆ. 2 ವರ್ಷಗಳಿಗೊಮ್ಮೆ ಸೋಲಿಗ ಆದಿವಾಸಿಗಳು ದೇವರಿಗೆಚರ್ಮದಿಂದ ಮಾಡಿದ1 ಅಡಿ 9 ಇಂಚು ಅಳತೆಯ ದೊಡ್ಡ ಚಪ್ಪಲಿಗಳನ್ನು ಅರ್ಪಿಸುತ್ತಾರೆ. ಜನಪದ ಕಥೆಯೊಂದು ರಂಗನಾಥನು ಕಾಡಿನಲ್ಲಿ ಅಲೆದಾಡುವಾಗ ಸೋಲಿಗ ಬುಡಕಟ್ಟು ಹುಡುಗಿಕುಸುಮಾಲೆಯನ್ನುನೋಡಿಅವಳನ್ನು ಪ್ರೀತಿಸಿ ಮದುವೆಯಾದನೆಂದು ಹೇಳಿದೆ. ಹೀಗಾಗಿ ಕುಸುಮಾಲೆಯನ್ನು ಸಹೋದರಿಯೆಂದುರಂಗನಾಥನನ್ನು ಸೋದರಮಾವನೆಂದು ನಂಬಿದ್ದಾರೆ. ದೇವಸ್ಥಾನ ಪಕ್ಕ ಬರುವ ಭಕ್ತಾದಿಗಳಿಗೆ ಊಟಕ್ಕೆಅಡಿಗೆ ಮಾಡಲು ಪ್ರತ್ಯೇಕ ಸ್ಥಳಾವಕಾಶವಿದೆ. ಈ ಮುಂಭಾಗ ಪಾರ್ಕಿನಂತೆ ಮರಗಿಡ ಬೆಳೆಸಿ ಕಲ್ಲು ಬೆಂಚು ಹಾಕಲಾಗಿದೆ. ಈ ಪ್ರದೇಶದ ಸುತ್ತತಂತಿ ಬೇಲಿ ಹಾಕಲಾಗಿದ್ದುಇಲ್ಲಿ ನಿಂತು ಬೆಟ್ಟದತಪ್ಪಲಿನ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಈ ಸ್ಥಳಕ್ಕೆ ನಾವು ಹೋದಾಗ ಮೂರ್ನಾಲ್ಕು ಹುಡುಗರುತುತ್ತತುದಿಯ ಬಂಡೆಗಲ್ಲು ಮೇಲೆ ನಿಂತು ಕೆಳಕ್ಕೆ ಕಲ್ಲುಒಗೆಯುತ್ತಿದ್ದರು. ಆಗ ಯಾರೋ ಮಹನೀಯರು “ಅಲ್ರಪ್ಪ ನೀವು ಒಗೆದಕಲ್ಲು ಅಕಸ್ಮಾತ್ ಜೇನುಗೂಡಿಗೆ ಏನಾದ್ರು ಬಿದ್ದು ಅವು ಎದ್ದರೆ ನೀವಷ್ಟೇ ಅಲ್ಲಾ ನಾವು ಎದ್ದುಬಿದ್ದುಇಲ್ಲಿಂದ ಓಡಿ ಹೋಗಬೇಕಾಗುತ್ತದೆ. ಏಕೀ ಹುಚ್ಚು ಸಾಹಸ? ಕೆಳಕ್ಕೆ ಬನ್ನಿ ಎಂದುಕರೆದರು. ಏಪ್ರಿಲ್ ತಿಂಗಳಿನಲ್ಲಿ ವೈಶಾಖ ವೇಳೆ ನಡೆಯುವದೇವರ ವಾರ್ಷಿಕಕಾರ್ಉತ್ಸವಪ್ರಸಿದ್ಧವಾಗಿದೆ.
ದೇವಸ್ಥಾನದಲ್ಲಿ ಪ್ರಸಾದ ಊಟ ವ್ಯವಸ್ಥೆ 1ಗಂಟೆಗೆಎಂದು ತಿಳಿಯಿತು. ಆಗ 11.30. ನಾವು ಊಟಕ್ಕೆ ಕಾಯದೆ ಬೆಟ್ಟದಿಂದ ಇಳಿದು ಬರುವಾಗಮೊಬೈಲ್ಆನ್ ಮಾಡಿದೆ.ಕಲ್ಪನ ಅವರ ಹಾಡಿನಹಿನ್ನಲೆಯಲ್ಲಿ ಬಯಲುಬೆಟ್ಟದದೃಶ್ಯಕಾಡಿನ ಮರವೆಲ್ಲಾ ಶ್ರೀ ಗಂಧವೇ..ನಾಡಿನ ಮಣ್ಣೆಲ್ಲಾ ಬಂಗಾರವೇ..ನೋಡಿದೆ.
-ಗೊರೂರುಅನಂತರಾಜು, ಹಾಸನ.
ಮೊ: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್, ಶ್ರೀ ಶನೇಶ್ವರದೇವಸ್ಥಾನರಸ್ತೆ, ಹಾಸನ.