"ರಂಗ ಒಲಿದ ದಾಸರಾಯ" (ವಿಶೇಷ ದಾಸವಾಣಿ ಕಾರ್ಯಕ್ರಮ)

VK NEWS
By -
0

ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ 'ಮಾನ್ವಿಯ ಮುನಿಪುಂಗವ' ಶ್ರೀ ಜಗನ್ನಾಥದಾಸರ ಆರಾಧನೆಯ ಪ್ರಯುಕ್ತ ಸೆಪ್ಟೆಂಬರ್12 , ಗುರುವಾರ ಸಂಜೆ 6-30ಕ್ಕೆ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಅವರು "ರಂಗ ಒಲಿದ ದಾಸರಾಯ" ಎಂಬ ಶೀರ್ಷಿಕೆಯಲ್ಲಿ ಜಗನ್ನಾಥದಾಸರನ್ನು ಕುರಿತ ಕೃತಿಗಳನ್ನೂ ಹಾಗೂ ಶ್ರೀ ಜಗನ್ನಾಥದಾಸರು ರಚಿಸಿರುವ ಕೃತಿಗಳನ್ನೂ ಪ್ರಸ್ತುತಪಡಿಸಲಿದ್ದಾರೆ. 

 ವಾದ್ಯಸಹಕಾರ : ಶ್ರೀ ಬಿ. ಆರ್. ಪ್ರಕಾಶ್ (ಕೀ-ಬೋರ್ಡ್), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ). 

ಈ ಮೇಲ್ಕಂಡ ವಿಶೇಷ ಕಾರ್ಯಕ್ರಮದಲ್ಲಿ ದಾಸಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಮಠದ ಗೌರವ ಅಧ್ಯಕ್ಷರಾದ ಡಾ|| ಸುಧೀಂದ್ರಕುಮಾರ್ ವಿನಂತಿಸಿದ್ದಾರೆ.

ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೆಂಗೇರಿ ಉಪನಗರ, ಬೆಂಗಳೂರು

Post a Comment

0Comments

Post a Comment (0)