ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ಪಡೆದ ಬಿಜೆಪಿ ನೂತನ ಸಂಸದ ಡಾ|| ಮಂಜುನಾಥ್ ದಂಪತಿ

VK NEWS
By -
0

 ಜಯನಗರ ರಾಯರ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ಪಡೆದ ಬಿಜೆಪಿ ನೂತನ ಸಂಸದ ಡಾ|| ಮಂಜುನಾಥ್ ದಂಪತಿಗಳು.

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 18ರಂದು ಬಿಜೆಪಿ ನೂತನ ಸಂಸದ ಡಾ|| ಮಂಜುನಾಥ್ ದಂಪತಿಗಳು ಶ್ರೀ ಗುರು ರಾಯರ ಬೃಂದಾವನಕ್ಕೆ ದೀಪ ಬೆಳಗಿಸಿ ನಂತರ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿ, ಆಶೀರ್ವಾದ ಪಡೆದುಕೊಂಡರು.  ಈ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರು, ಶ್ರೀ ನಂದಕಿಶೋರ್ ಆಚಾರ್ಯರು , ಶ್ರೀ ಕೃಷ್ಣಾಚಾರ್ಯರು, ಉದ್ಯಮಿ ಶ್ರೀ ಕಿರಣ್ ಕುಮಾರ್ ಮತ್ತು ಶ್ರೀ ಮಠದ ಸಿಬ್ಬಂದಿಗಳು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)