ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗುರುರಾಜ ಸೇವಾ ಸಮಿತಿ, ಯಲಹಂಕ ಉಪನಗರ, ಬೆಂಗಳೂರು, ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 30 ರಿಂದ ಆಗಸ್ಟ್ 2 ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ :
(ಪ್ರತಿದಿನ ಸಂಜೆ 6 ರಿಂದ 7)
ಜುಲೈ 30, ಮಂಗಳವಾರ : ಶ್ರೀ ವಿಜಯವಿಠ್ಠಲ ಭಜನಾ ಮಂಡಳಿ, (ವಿದ್ಯಾರಣ್ಯಪುರ), ಜುಲೈ 31, ಬುಧವಾರ : ಸಮೀರ ಭಜನಾ ಮಂಡಳಿ, (ಯಲಹಂಕ), ಆಗಸ್ಟ್ 1, ಗುರುವಾರ : ವೈಷ್ಣವಿ ಭಜನಾ ಮಂಡಳಿ, (ಯಲಹಂಕ ).
ಪ್ರವಚನ ಕಾರ್ಯಕ್ರಮ
(ಪ್ರತಿದಿನ ಸಂಜೆ 7 ರಿಂದ 8)
ಮ||ಶಾ||ಸಂ|| ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ
"ಸುಮಧ್ವ ವಿಜಯ" ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ : ಆಗಸ್ಟ್ 2, ಶುಕ್ರವಾರ ಸಂಜೆ 6-30 ರಿಂದ 8-00
ಗಾಯನ : ಶ್ರೀಮತಿ ರಮ್ಯಾ ಸುಧೀರ್, ಪಿಟೀಲು : ಶ್ರೀ ಎಸ್. ಶಶಿಧರ್, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #5, 8ನೇ ಮುಖ್ಯರಸ್ತೆ, ಯಲಹಂಕ ಉಪನಗರ, ಬೆಂಗಳೂರು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.