ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ನಿಂದ ರಾಷ್ಟ್ರಮಟ್ಟದ ಪಟ್ಟಣ ಸಹಕಾರಿ ಬ್ಯಾಂಕುಗಳ ಸಮಾವೇಶ

VK NEWS
By -
0

"ಮಾಹಿತಿ, ಭದ್ರತೆ ಮತ್ತು ತಂತ್ರಜ್ಞಾನ" ಕುರಿತ ಗೋಷ್ಟಿ : ಬ್ಯಾಂಕ್ ಗಳಲ್ಲಿ ಸೈಬರ್ ಭದ್ರತೆ, ದತ್ತಾಂಶ ಸುರಕ್ಷೆತೆಗೆ ಉತ್ತಮ ವಿಧಾನ ಅಳವಡಿಸಿಕೊಳ್ಳಲು ನಿರ್ಧಾರ

ಬೆಂಗಳೂರು, ಜೂ, 23; ಶತಮಾನಕ್ಕೂ ಮೀರಿದ ಇತಿಹಾಸ ಹೊಂದಿರುವ ಪ್ರಮುಖ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ "ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ನಿಂದ   "ಮಾಹಿತಿ, ಭದ್ರತೆ ಮತ್ತು ತಂತ್ರಜ್ಞಾನ" ಕುರಿತ ಪಟ್ಟಣ ಸಹಕಾರಿ ಬ್ಯಾಂಕುಗಳ   ಸಮಾವೇಶ ನಗರದಲ್ಲಿಂದು ಜರುಗಿತು. 

ಡಾ. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ 150 ಪಟ್ಟಣ ಸಹಕಾರಿ ಬ್ಯಾಂಕ್ ಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ತಂಡದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ದೇಶಾದ್ಯಂತ ಐ.ಟಿ. ವಲಯದ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. 

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಮಹಾ ಮಂಡಳದ ಹಿರಿಯ ನಿರ್ದೇಶಕ ರುದ್ದೇಗೌಡ ಮಾತನಾಡಿ, ಪಟ್ಟಣ ಬ್ಯಾಂಕ್ ಗಳಲ್ಲಿ ಸುರಕ್ಷತೆ ಅತ್ಯಂತ ಅಗತ್ಯವಾಗಿದೆ. ದತ್ತಾಂಶ ರಕ್ಷಣೆ, ಸೈಬರ್ ರಕ್ಷಣೆಗೆ ಬ್ಯಾಂಕ್ ಗಳ ಆಡಳಿತ ಮಂಡಳಿಗಳು ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕು. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವಿಶೇಷ ಗಮನಹರಿಸಬೇಕು. ಮೈ ಎಲ್ಲಾ ಕಣ್ಣಾಗಿ ಕಾರ್ಯನಿರ್ವಹಿಸಬೇಕು ಎಂದರು. 

ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಜಿ. ಅನಂತ್ ಕುಮಾರ್ ಮಾತನಾಡಿ, ದತ್ತಾಂಶ ಮತ್ತು ಸೈಬರ್ ಭದ್ರತೆಗೆ ಕೇಂದ್ರ ಸರ್ಕಾರ 2014 ರಲ್ಲಿ ಜಾರಿಗೆ ತಂದ ನಿಯಮಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಮತ್ತಷ್ಟು ಸುಧಾರಿತ ತಂತ್ರಜ್ಞಾನ ಮತ್ತು ನಿಯಮಗಳ ಅಳವಡಿಕೆ ಅಗತ್ಯ. 108 ವರ್ಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವ ನಮ್ಮ ಬ್ಯಾಂಕ್ ನಲ್ಲಿ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದರು. 

ಸಹಕಾರ ಸಂಘಗಳ ಜಂಟಿ ನಿಬಂಧಕ ಪಿ. ಮಹೇಶ್, ಬ್ಯಾಂಕಿನ ಸಿಇಒ ಜೆ. ಪ್ರಕಾಶ, ಐ.ಟಿ ಮುಖ್ಯಸ್ಥ ಬಿ.ಕೆ. ಗೋಪಿನಾಥ್,  ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಆರ್. ವೆಂಕಟೇಶ್ ಸಂವಾದದಲ್ಲಿ ಭಾಗವಹಿಸಿದ್ದರು. 

ರಾಘವ್ ಗುಪ್ತಾ, ನಿರ್ದೇಶಕರು, ಮೈಂಡ್ ಮಿಲ್ ಸಾಫ್ಟ್ವೇರ್ ಲಿಮಿಟೆಡ್, ನೋಯ್ದಾ, ಪಿಯುಷ್ ಸೋಮಾನಿ, ಸಿಎಂಒ ಮತ್ತು ಸಿಇಒ, ಇಎಸ್ ಡಿಸ್ ಸಾಫ್ಟ್ವೇರ್, ನಾಸಿಕ್, ರಾಮಕುಮಾರ್ ಶೇಖರ್, ಸಿಇಒ, ಯಲಮನ್ಚಲಿ ಡಿಜಿಟಲ್ ಸಲ್ಯೂಷನ್, ಚೆನ್ನೈ ಮತ್ತು  ಭಾಸ್ಕರ್ ಪರಶುರಾಮ್, ನಿರ್ದೇಶಕರು, ಐ.ಟಿ. ಸೆಕ್ಯುರಿಟೀಸ್, ಪ್ರೋಟೆಕ್ ಮೈಕ್ರೋಸಿಸ್ಟಮ್, ಬೆಂಗಳೂರು: ಚರ್ಚೆಗಳಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.

Tags:

Post a Comment

0Comments

Post a Comment (0)