ಬಿಬಿಎಂಪಿ ಆಡಳಿತಗಾರರಾಗಿ ಅಧಿಕಾರ ಸ್ವೀಕಾರ ಎಸ್.ಆರ್..ಉಮಾಶಂಕರ್ ರವರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸನ್ಮಾನ
ಬಿಬಿಎಂಪಿ ಕೇಂದ್ರ ಕಛೇರಿ: ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಎಸ್.ಆರ್.ಉಮಾಶಂಕರ್ ರವರು ಬಿಬಿಎಂಪಿ ಆಡಳಿತಗಾರರಾಗಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರ ಸ್ಮಮುಖದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮತ್ತು ಸಾಯಿಶಂಕರ್ ರವರು ಪುಷ್ಪಗುಚ್ಚ ನೀಡಿ, ಆತ್ಮೀಯವಾಗಿ ಸನ್ಮಾನಿಸಿದರು.
ಅದಿಕಾರಿ ಮತ್ತು ನೌಕರರ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯ.
ಅಧಿಕಾರಿ ಮತ್ತು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಆಡಳಿತಗಾರರು ಮತ್ತು ಮುಖ್ಯ ಆಯುಕ್ತರ ಸಹಕಾರ ಬೆಂಬಲವಿರಬೇಕು.
ಬೆಂಗಳೂರುನಗರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿ ಮತ್ತು ನೌಕರರು ಒಗ್ಗಾಟ್ಟಗಿ ಶ್ರಮಿಸುವುದಕ್ಕೆ ಸಂಘವು ಸಹಕಾರ ನೀಡಲಿದೆ.
ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ, ಉಮೇಶ್, ರುದ್ರೇಶ್, ಹೆಚ್.ಬಿ.ಹರೀಶ್ , ಹೆಚ್.ಕೆ.ತಿಪ್ಪೇಶ್,
ಶ್ರೀಧರ್ ಎನ್ ಸಂತೋಷ್ ಕುಮಾರ್, ಎನ್.ಮಂಜುನಾಥ್, ಕೆ.ನರಸಿಂಹ , ಕೆ.ಸಂತೋಷ್ ಕುಮಾರ್ ನಾಯ್ಕ್ ರವರು ಉಪಸ್ಥಿತರಿದ್ದರು.