ಗುರು ರಾಯರ ಬೃಂದಾವನಕ್ಕೆ "ಶ್ರೀಗಂಧ ಲೇಪನ" ಅಲಂಕಾರದ ವಿಶೇಷ ಸೇವೆ 10-5-2024

VK NEWS
By -
0

ಜಯನಗರದ 5 ನೇ ಬಡಾವಣೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಅಕ್ಷಯ ತೃತೀಯಾ ಪ್ರಯುಕ್ತ ಮೇ 10ನೇ ತಾರೀಕು ಶುಕ್ರವಾರದಂದು ರಾಯರ ಬೃಂದಾವನಕ್ಕೆ ಸಂಪೂರ್ಣವಾಗಿ ಶ್ರೀಗಂಧದಿಂದಲೇ ಅಲಂಕಾರವನ್ನು ಮಾಡಲಾಗುತ್ತದೆ. 

ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವರ್ಷಕ್ಕೊಮ್ಮೆ ಆಚರಿಸುವಂತಹ ಬಹಳ  ಅಪರೂಪವಾದ "ಶ್ರೀ ಗಂಧ ಲೇಪನದ ಸೇವೆ". ಈ ಸೇವೆಯಲ್ಲಿ ಭಕ್ತಾದಿಗಳು ಆನ್ಲೈನ್  ಈ ನಂಬರ್ -9449133929 ಮುಖಾಂತರ ಸೇವೆ ಸಲ್ಲಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.

 ಈ ಸೇವೆಯನ್ನು ಮಾಡಿಸಿರುವ ಭಕ್ತರಿಗೆ ಶನಿವಾರ 11ನೇ ತಾರೀಖಿನಂದು ಶ್ರೀಗುರು ರಾಯರ ಬೃಂದಾವನಕ್ಕೆ  ಸಮರ್ಪಿಸಿ ಅಲಂಕರಿಸಿದ ಶ್ರೀಗಂಧದ ಪ್ರಸಾದವನ್ನು ಕೊಡಲಾಗುವುದು. ಈ  ಸೇವೆಯಲ್ಲಿ ಭಗವತ್ ಭಕ್ತರು ಭಾಗವಹಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ-08022443962-9945429129-9449133929-8660349906

Post a Comment

0Comments

Post a Comment (0)