ಶ್ರೀವ್ಯಾಸ-ಶ್ರೀಶ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ

VK NEWS
By -
0

 ವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶದ  ಮೇರೆಗೆ  ಶ್ರೀವ್ಯಾಸರಾಜ ಮಠ ಹಾಗೂ ಶ್ರೀವ್ಯಾಸತೀರ್ಥ ವಿದ್ಯಾಪೀಠದ ವತಿಯಿಂದ ಸೋಸಲೆಯ ವ್ಯಾಸರಾಜ ಮಠದಲ್ಲಿ 16-4-24 ರಿಂದ ಒಂಬತ್ತು ದಿನಗಳ ಕಾಲ ನಡೆದ ಶ್ರೀವ್ಯಾಸ-ಶ್ರೀಶ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭವು 24-04-24 ರಂದು ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಜರುಗಿತು.

  ಧಾರ್ಮಿಕ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಆಶೀರ್ವಚನವನ್ನು ನೀಡಿದ ಶ್ರೀಪಾದರು " ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವು ಅತ್ಯಗತ್ಯ. ಧಾರ್ಮಿಕ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಪಡೆದು ಸಮಾಜದಲ್ಲಿ ಒಳ್ಳೆಯ ಪ್ರಭಾವವನ್ನು ಉಂಟು ಮಾಡುವರು. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಪಾಲಕರು ಮನೆಯಲ್ಲೂ ಕೂಡ ಮುಂದುವರಿಸಿಕೊಂಡು ಹೊಗುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಶಿಬಿರದ ಮಹತ್ವ ವ್ಯಾಪ್ತಿ ಮತ್ತು ಪಾಲಕರ ಜವಾಬ್ದಾರಿಯನ್ನು ತಮ್ಮ ಪ್ರವಚನದಲ್ಲಿ ತಿಳಿಸಿಕೊಟ್ಟರು.


 ನಿರೂಪಣೆಯನ್ನು ನಡೆಸಿಕೊಟ್ಟ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀನಿಧಿ  ಪ್ಯಾಟಿ ಆಚಾರ್ಯರು ಶ್ರೀಪಾದಂಗಳವರು ವ್ಯಾಸರಾಜ ಮಠದ ಪೀಠಾಧಿಪತಿಗಳಾದ ನಂತರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇಂದು ನವೀಕರಣಗೊಂಡ ಸೋಸಲೆಯ ಮಠದಲ್ಲಿ ಈ ರೀತಿಯಾದ ಶಿಬಿರವನ್ನು ನಡೆಸಲು ಸಾಧ್ಯವಾಯಿತು ಎಂದು ಶ್ರೀಪಾದಂಗಳವರ ದೂರದೃಷ್ಟಿಯನ್ನು ವಿವರಿಸಿದರು . 






ಗುರುಕುಲ ಮಾದರಿ ಜೀವನ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜನೆಗೊಂಡಿದ್ದ ಈ ಶಿಬಿರದಲ್ಲಿ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರೆಲ್ಲರಿಗೂ ಶ್ರೀಪಾದರು ಪ್ರಮಾಣಪತ್ರ ಹಾಗೂ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

ಶಿಬಿರದ ಆಯೋಜನೆಗೆ ಸಕಲವಿಧಲಾದ ವ್ಯವಸ್ಥೆಯನ್ನು ಕಲ್ಪಿಸಿ ಶಿಬಿರವನ್ನು ಯಶಸ್ವಿಯಾಗಿಸಿದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಗೌ.ಕಾರ್ಯದರ್ಶಿಗಳಾದ ಡಾ.ಡೀ.ಪಿ.ಮಧುಸೂಧನಾಚಾರ್ಯರಿಗೆ ವಂದನೆಗಳನ್ನು ಸಲ್ಲಿಸಿದರು. ಮಠದ ವ್ಯವಸ್ಥಾಪಕರಾದ ಶ್ರೀಧರ ಹಾಗೂ ಸಿಬ್ಬಂದಿಗಳ  ಹಾಗೂ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಸಹಕಾರವನ್ನು ಸ್ಮರಿಸಿದರು.

Post a Comment

0Comments

Post a Comment (0)