ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಬರಹ

VK NEWS
By -
0

ಹಿಂದೂಗಳು ವಿಶೇಷವಾಗಿ ಬ್ರಾಹ್ಮಣರಲ್ಲಿ ಸ್ತ್ರೀಯರಿಗೆ ಸ್ವತಂತ್ರ ಇಲ್ಲ ಎನ್ನುವವರಿಗೆ ನನ್ನ ಪುಟ್ಟ ಬರಹ.ಹಿಂದೂಗಳಲ್ಲಿ ಮೊದಲ ಮೂರು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಇವರಿಗೆಲ್ಲ ಉಪನಯನ ಸಂಸ್ಕಾರ ಇದೆ.ನಂತರ ಮಾಡುವ ಸಂಧ್ಯಾವಂದನೆಯ ಅಧಿದೇವತೆ ಗಾಯತ್ರಿ, ಒಬ್ಬ ಸ್ತ್ರೀ ದೇವತೆ. ಶೂದ್ರ ಹಾಗೂ ಇತರೆ ಪಂಚಮರಲ್ಲಿ ಈ ಸಂಸ್ಕಾರ ಇಲ್ಲ.ಈಗ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಇಲ್ಲದ ಕೂಗು ಹಬ್ಬಿಸುತ್ತಿರುವುದು ಇವರುಗಳೇ.ನಮ್ಮ ಮಹತ್ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತ ನಡೆದಿದ್ದೇ ಸ್ತ್ರೀ ಮರ್ಯಾದಾ ರಕ್ಷಣೆಗೆ ಧಕ್ಕೆ ಬಂದಾಗ.ಇವತ್ತು ಯಾವ ದಶಾವತಾರ ಕಥೆಗಳನ್ನು ನಮ್ಮ ಬಯೋಲಾಜಿಕಲ್ evolution ಎನ್ನುತೇವೆ ಅಲ್ಲಿಯೂ ನಾವು ಸ್ತ್ರೀ ಪಾತ್ರ ಗಳಿಗೆ ಪ್ರಾಮುಕ್ಯತೆ ಕಾಣಬಹುದು.ಆರ್ಯರು ಪುರುಷ ಪ್ರಧಾನ ಸಮಾಜ ಎನ್ನುವುದು ತಪ್ಪು ಕಲ್ಪನೆ.ಆರ್ಯರ ಭಾಷೆ ಎಂದೇ ಪರಿಗಣಿಸಲ್ಪಟ್ಟ ಸಂಸ್ಕೃತದಲ್ಲಿ ಮೊತ್ತ ಮೊದಲು ನಾವು ಕೇಳುವುದೇ ಮಾತೃ ದೇವೋಭವ ಎಂದು.ದ್ರಾವಿಡ ರಲ್ಲಿ ಹೆಣ್ಣು ಸಂತತಿ ಹಾಗೂ ಗೋತ್ರ ಗಳ ಮುಂದುವರಿಕೆ ಇದೆ ಎನ್ನುವ ವಿಚಾರ ಕುಟುಂಬದಲ್ಲಿ ಹಾಗೂ ದೈನಂದಿನ ಕಾರ್ಯಗಳಲ್ಲಿ ಅವರ ಕೊಡುಗೆ ಇಂದ ಬಂದಿದ್ದಿರಬಹುದು.


ಸ್ತ್ರೀಯರಿಗೆ ಸ್ವಾತಂತ್ರ್ಯ ಇತ್ತು ಎನ್ನುವುದು ನನ್ನ ಅಭಿಪ್ರಾಯ.ಆದರೆ ಕಾಲಾಂತರದಲ್ಲಿ ವಿದೇಶೀಯರ ಆಕ್ರಮಣ ಗಳಿಂದ ಸ್ತ್ರೀಯರ ಸ್ವಾತಂತ್ರಕ್ಕೇ ಅಡ್ಡಿ ಬಂತು.ನೆನಪಿರಲಿ ನಮ್ಮ ಸ್ತ್ರೀ ಯರೂ ಯುದ್ಧಗಳನ್ನು ಮಾಡುತ್ತಿದ್ದರು.ಆದರೆ ಮನೆಯ ಹಾಗೂ ಮಕ್ಕಳ ಜವಾಬ್ದಾರಿಗಳ ಕಾರಣದಿಂದ ಅವರು ಯುದ್ದರಂಗದಿಂದ ದೂರ ಇರಬೇಕಾಯಿತೇ ನೋ.ಇದರಿಂದ ಬಹುಶಃ ಅವರ ಸ್ಥಾನ ಸ್ವಲ್ಪ ಕಡಿಮೆ ಆಗುತ್ತಾ ಬಂದಿರಬೇಕು.ಸಂಸ್ಕೃತ ಭಾಷಾ ವಿದ್ಯಾರ್ಥಿನಿ ಆಗಿ ನನಗೆ ಎಲ್ಲೂ ಸ್ತ್ರೀಯರು ಕಡಿಮೆ ಎಂದು ಎಲ್ಲೂ ಓದಿದ ಹಾಗೆ ಅಥವಾ ಆ ಭಾವನೆ ಬಂದ ಹಾಗೆ ಅನ್ನಿಸಲಿಲ್ಲ.ಮನು ಸ್ಮೃತಿಯ ಕಾಲದ ಜನಜೀವನ ಈ ಗ ಇಲ್ಲ.ಹಾಗಾಗಿ ಕಾಲಕ್ಕೆ ತಕ್ಕಂತೆ ಹಾಗೂ ಪರಿಪೂರ್ಣ ಜೀವನವನ್ನು ಸ್ತ್ರೀ ಯಾರಿಗೆ ನೀಡುವುದು ಅವರ ಜನ್ಮತಃ ಬಂದ ಹಕ್ಕು.ವಿಷಯಸೂಚನೆ ನಮ್ಮಲ್ಲಿ ಎಲ್ಲ ಶುಭ ಕಾರ್ಯಗಳಿಗೆ ಸ್ತ್ರೀಯರು ಇರಲೇಬೇಕು.ಇದೂ ಕೂಡ ಒಂದು ಧಾರ್ಮಿಕ ಕಟ್ಟಳೆ.

ಸ್ತ್ರೀಯರಿಗೆ ಬೆಂಬಲ ನೀಡಿ.ಅ ಶ್ಟು ಸಾಕು.ಮಿಕ್ಕಿದ್ದನ್ನು ಅವರೇ ನೋಡಿಕೊಳ್ಳುತ್ತಾರೆ.

-ರಾಧಿಕಾ ಜಿ ಎನ್

7019990492

Post a Comment

0Comments

Post a Comment (0)