ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಜನವರಿ 10, ಶುಕ್ರವಾರ ಬೆಳಗ್ಗೆ 7-30 ರಿಂದ ರಾತ್ರಿ 12-00ರ ವರೆಗೆ "ಅಖಂಡ ಭಾಗವತ" ಪ್ರವಚನ ಏರ್ಪಡಿಸಿದೆ.
ಪ್ರವಚನ ನೀಡುವ ವಿದ್ವಾಂಸರು : (ಕ್ರಮವಾಗಿ) : ಶ್ರೀ ಚಂದ್ರಶೇಖರ ಆಚಾರ್ಯ (ಪ್ರಥಮ ಸ್ಕಂದ), ಶ್ರೀ ದ್ವೈಪಾಯನಾಚಾರ್ಯ ಜೋಷಿ (ದ್ವಿತೀಯ ಸ್ಕಂದ), ಶ್ರೀ ದಂಬಳ ಜಯಸಿಂಹಾಚಾರ್ಯ (ತೃತೀಯ ಸ್ಕಂದ), ಶ್ರೀ ಕೃಷ್ಣಾಚಾರ್ಯ ಕೆಂಪದಾಳಿಹಳ್ಳಿ (ಚತುರ್ಥ ಸ್ಕಂದ), ಶ್ರೀ ಪ್ರಶಾಂತ ಭಾರ್ಗವಾಚಾರ್ಯ (ಪಂಚಮ ಸ್ಕಂದ), ಶ್ರೀ ರಾಮವಿಠಲಾಚಾರ್ಯ (ಷಷ್ಟಮ ಸ್ಕಂದ), ಶ್ರೀ ಬ್ರಹ್ಮಣ್ಯಾಚಾರ್ಯ (ಸಪ್ತಮ ಸ್ಕಂದ), ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ (ಅಷ್ಟಮ ಸ್ಕಂದ), ಶ್ರೀ ಆನಂದತೀರ್ಥಾಚಾರ್ಯ ಮಾಳಗಿ (ನವಮ ಸ್ಕಂದ), ಶ್ರೀ ಶ್ರೀನಿಧಿ ಆಚಾರ್ಯ (ದಶಮ ಸ್ಕಂದ) ಮತ್ತು ಶ್ರೀ ರಾಘವಾಚಾರ್ಯ ಮಿಟ್ಟಿ (ಏಕಾದಶ ಸ್ಕಂದ).
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003