ಬೆಂಗಳೂರು ಪೂರ್ಣ ವಿಕಾಸ ವಿದ್ಯಾಲಯದಲ್ಲಿ ನಡೆದ ಜಾನಪದ ಹಾಗೂ ರಂಗ ಗೀತೆಗಳ ಪರಿಚಯವಿಲ್ಲದ ಯುವಕರು ಹಲವಾರು. ಹಾಗಾಗಿ ರಂಗಶರಧಿಯ ನಂಬಿಕೆ ಏನೆಂದರೆ, ಮನಸ್ಸು ಮಾಡಿದರೆ ಯಾರಾದರೂ ರಂಗ ಗೀತೆಗಳನ್ನು ಹಾಡಬಹುದು, ನಿಪುಣ ಗಾಯಕರೇ ಆಗಿರಬೇಕಿಲ್ಲ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಕೃತಿಗಳ ತಂಡವಾದ ರಂಗಶರಧಿಯು ಪೂರ್ಣ ವಿಕಾಸ ವಿದ್ಯಾಲಯದಲ್ಲಿ ರಂಗ ಗೀತೆಗಳ ಯಶಶ್ವಿಯಾಗಿ ಪ್ರದರ್ಶನಗೊಂಡಿತು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪೂರ್ಣ ವಿಕಾಸ ವಿದ್ಯಾಲಯದ ಸಂಸ್ಥಾಪಕರಾದ “ಶ್ರೀ ಮಂಜುನಾಥ್ ಹಾಗೂ ಚಲನಚಿತ್ರ ನಟ, ನಿರ್ಮಾಪಕ ಶ್ರೀ ಗಂಡಸಿ ಸದಾನಂದಸ್ವಾಮಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಆಯೋಜನೆ ರಂಗಶರಧಿಯ ಅಧ್ಯಕ್ಷರು -ಶ್ರೀ ಸೋಮಶೇಖರ್ ರವರು , ಹಾಡುವ ಕಲಾವಿದರು - ಸಹನಾ , ಹಿಮ , ಪ್ರಾರ್ಥನಾ , ಶರಣ್ಯ ಚಂದನ್ , ಯಧುನಂದನ್ ಸ್ಮೃತಿ , ನಾಗೇಶ್ ಹಾಗು ಅನನ್ಯ . ಮೇಳದಲ್ಲಿ ಮುಕುಂದ ಹಾಗು ಮನೋಜ್ ಸೇರಿದಂತೆ ಅನೇಕ ರಂಗ ಯುವ ಕಲಾವಿದರು ಸೇರಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.