ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವ ಸಂಭ್ರಮ 2024-25ರ ಪ್ರಯುಕ್ತ ಮಾರ್ಚ್ 16, ಶನಿವಾರ ಸಂಜೆ 6-00 ಗಂಟೆಗೆ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ವಿದ್ವಾನ್ ಶ್ರೀ ಎಸ್. ಶೇಷಗಿರಿರಾವ್ ಮತ್ತು ವಿದ್ವಾನ್ ಶ್ರೀ ಅನಿರುದ್ಧ ಭಾರಧ್ವಾಜ್ (ಗುರು-ಶಿಷ್ಯರು) ಇವರುಗಳಿಂದ "ದ್ವಂದ್ವ ಪಿಟೀಲು ವಾದನ" ಕಾರ್ಯಕ್ರಮ ಏರ್ಪಡಿಸಿದೆ.
ಸಹ-ವಾದ್ಯ ಸಹಕಾರ : ವಿದ್ವಾನ್ ಶ್ರೀ ಟಿ.ಎಸ್. ಚಂದ್ರಶೇಖರ್ (ಮೃದಂಗ), ವಿದ್ವಾನ್ ಶ್ರೀ ಬಿ.ಎಸ್ . ರಘುನಂದನ್ (ಘಟ).