LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವಪರಿಸರ ದಿನಾಚರಣೆ: ಪರಿಸರ ಸ್ನೇಹಿ ಗಿಡ ನೆಡುವ ಕಾರ್ಯಕ್ರಮ, ಅಲಂಕಾರಿಕ ಸಸಿಗಳ ವಿತರಣೆ 

ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ: ಕಮಲನಗರ: ಶಕ್ತಿಗಣಪತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಅಲಂಕಾರಿಕ ಸಸಿಗಳ ವಿತರಣಾ ಕಾರ್ಯಕ್ರಮ. ಆಡಳಿತ ಪಕ್ಷದ ನಾಯಕ ಎಮ್.ಶಿವರಾಜುರವರು ಮತ್ತು ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿರವರು ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ ಅಚರಿಸಿದರು.


ಇದೇ ಸಂದರ್ಭದಲ್ಲಿ *ಎಸ್.ಕೇಶವಮೂರ್ತಿರವರು* ಮಾತನಾಡಿ ಬೆಂಗಳೂರುನಗರ ಅಭಿವೃದ್ದಿಗಾಗಿ ಮರಗಿಡಗಳನ್ನು ಕಡಿದು ಕಾಂಕ್ರೀಟ್ ನಗರ ಎಂಬ ಕುಖ್ಯಾತಿ ಪಡೆದಿದೆ.

ಮಹಾಲಕ್ಷ್ಮಿಪುರಂ ಮತ್ತು ಶಕ್ತಿಗಣಪತಿನಗರ, ಶಂಕರಮಠ ವಾರ್ಡ್ ನಲ್ಲಿ ಕಳೆದ ವರ್ಷಗಳಿಂದ ಸಸಿಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು, ಮರಗಳನ್ನಾಗಿ ಬೆಳಸಲಾಗುತ್ತಿದೆ

ಬೆಂಗಳೂರುನ ನಗರಕ್ಕೆ ಗ್ರೀನ್ ಸಿಟಿ, ಗಾರ್ಡನ್ ಸಿಟಿ ಎಂಬ ಖ್ಯಾತಿ ಇದೆ ಅದನ್ನು ಉಳಿಸಿ, ಬೆಳಸಬೇಕು ಎಂದರೆ ಪ್ರತಿಯೊಬ್ಬರು ಅವರ ಮನೆ ಮುಂದೆ ಸಸಿ ನೆಟ್ಟು ಪೋಷಣೆ ಮಾಡಬೇಕು ಇದರಿಂದ ಹಸಿರು ಬೆಂಗಳೂರು ನಿರ್ಮಾಣವಾಗಲಿದೆ ಎಂದು ಹೇಳಿದರು.

*ಎಮ್.ಶಿವರಾಜುರವರು* ಮಾತನಾಡಿ ಪರಿಸರ ಉಳಿದರೆ ನಾಡು ಉಳಿಯುತ್ತದೆ ಪರಿಸರ ಹಾಳಾದರೆ ಇಡಿ ಮನುಕುಲುವೇ ನಾಶವಾಗುತ್ತದೆ.

ಪರಿಸರ ಉಳಿಯಬೇಕಾದರೆ ಪ್ರತಿಯೊಬ್ಬರು ಸಸಿ ನೆಟ್ಟು ಮರವಾಗಿ ಬೆಳಸಬೇಕು. ಮರ ಗಿಡಗಳು ಇದ್ದಾಗ ಉತ್ತಮ ವಾತವರಣ, ಅಮ್ಲಜನಕ ದೊರೆಯುತ್ತದೆ ಇದರಿಂದ ಆರೋಗ್ಯವಂತರಾಗಿ ಬಾಳಬಹುದು.

ಮನೆ ಮುಂದೆ ಗಿಡ ನೆಡಲು ಸಾಧ್ಯವಾದವರಿಗೆ ಅಲಂಕಾರಿಕ ಸಸಿಗಳನ್ನು ನೀಡಲಾಗುತ್ತಿದೆ ಅಲಂಕಾರಿಕ ಸಸಿಗಳಿಂದ ಮನೆಯ ಸೌಂದರ್ಯದ ಜೊತೆಯಲ್ಲಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನರಸಿಂಹಮೂರ್ತಿ, ಜಿ.ಜನಾರ್ಧನ್, ಕೆ.ವಿ.ನಟರಾಜ್, ಪರಿಸರ ರಾಮಕೃಷ್ಣ, ಸುರೇಶ್, ಚಂದ್ರಶೇಖರ್, ಗಂಗಾಧರ್, ಶ್ರೀನಿವಾಸ್ , ಚಂದ್ರಕಾಸಿನ್ ಮತ್ತು ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ