ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 2003 ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಒಂದು ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2003 ರ ಏಕದಿನ ವಿಶ್ವಕಪ್ ತಂಡದಿ0ದ ತನ್ನನ್ನು ಕೈಬಿಟ್ಟ ನಂತರ ಮಾಜಿ ತಂಡದ ಸಹ ಆಟಗಾರ ವಿವಿಎಸ್ ಲಕ್ಷ್ಮಣ್ ಮೂರು ತಿಂಗಳ ಕಾಲ ತನ್ನೊಂದಿಗೆ ಮಾತನಾಡಲಿಲ್ಲ, ಏಕೆಂದರೆ, ದಿನೇಶ್ ಮೊಂಗಿಯಾ ಅವರನ್ನು ಬದಲಾಯಿಸಿದರು ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ, ಆಗಿನ ಆಯ್ಕೆ ಸಮಿತಿ ಮುಖ್ಯಸ್ಥ ಕಿರಣ್ ಮೋರೆ, ಎಲ್ಲಾ ಐದು ಆಯ್ಕೆದಾರರು ಲಕ್ಷ್ಮಣ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಬಯಸಿದ್ದರು, ಆದರೆ ಗಂಗೂಲಿ ಮತ್ತು ಮುಖ್ಯ ತರಬೇತುದಾರ ಜಾನ್ ರೈಟ್ ಬೇರೆ ಯೋಜನೆಗಳನ್ನು ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ.
"2003 ರ ಏಕದಿನ ವಿಶ್ವಕಪ್ ಆಯ್ಕೆ ಸಭೆಯ ಮೊದಲು, ಭಾರತ ತಂಡ ನ್ಯೂಜಿಲೆಂಡ್ನಲ್ಲಿ ಆಡುತ್ತಿದ್ದಾಗ ನಮ್ಮ ನಡುವೆ ದೊಡ್ಡ ವಾಗ್ವಾದ ನಡೆಯಿತು. ನಾಯಕ ಮತ್ತು ತರಬೇತುದಾರರಿಂದ ಬಂದ ಮಾಹಿತಿ ಪ್ರಕಾರ, 14 ಸದಸ್ಯರ ತಂಡವನ್ನು ಆಯ್ಕೆ ಮಾಡಿ ಅದರ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಕೇಳಿದೆವು. ಕಾನ್ಫರೆನ್ಸ್ ಕರೆಯ ಸಮಯದಲ್ಲಿ, ಗಂಗೂಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದರು. ನಾವು ವಿವಿಎಸ್ ಲಕ್ಷ್ಮಣ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಿದ್ದೇವೆ. ಗಂಗೂಲಿ ತುಂಬಾ ಬುದ್ಧಿವಂತರಾಗಿದ್ದರು. ಅವರು ಅದ್ಭುತ ನಾಯಕರಾಗಿದ್ದರು, ಅವರು 'ನಮಗೆ ಆಲ್ರೌಂಡರ್ ಬೇಕು' ಎಂದು ಹೇಳಿದರು" ಎಂದು ಪಾಕಿಸ್ತಾನದ ಮಾಜಿ ನಾಯಕ ರಶಿತ್ ಲತೀಫ್ಗೆ ಮೋರೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದರು.