LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತುಮಕೂರು ಮಹಾನಗರ ಪಾಲಿಕೆಯಿಂದ ದೇಶದಲ್ಲೇ ಮೊತ್ತಮೊದಲ ‘ಕಸ ಡೆಲಿವರಿ ಬಾಯ್ಸ್’ ಸೇವೆ

ತುಮಕೂರು, ಕಲ್ಪತರ ನಾಡು, ಇತ್ತೀಚೆಗೆ ಮತ್ತೊಂದು ವಿಶಿಷ್ಟ ಹೆಜ್ಜೆ ಹಾಕಿ ಇಡೀ ದೇಶದ ಗಮನ ಸೆಳೆದಿದೆ. ಈ ಬಾರಿ ತುಮಕೂರು ಮಹಾನಗರ ಪಾಲಿಕೆ ಹೊಸ ಪ್ರಯೋಗಕ್ಕೆ ಮುಂದಾಗಿ ‘ಡೆಲಿವರಿ ಬಾಯ್ಸ್’ ಮಾದರಿಯ ಕಸ ವಿಲೇವಾರಿ ಸೇವೆ ಆರಂಭಿಸಿರುವುದು ವಿಶೇಷ.







ಸ್ವಿಗ್ಗಿ-ಜೋಮ್ಯಾಟೋ ಶೈಲಿಯ ಆನ್‌ಲೈನ್ ಕಸ ಸಂಗ್ರಹಣೆ ಸೇವೆ


ದೇಶದ ಇತಿಹಾಸದಲ್ಲಿ ಇದೇ ಮೊತ್ತಮೊದಲ ಬಾರಿ ಒಂದು ಮಹಾನಗರ ಪಾಲಿಕೆ ಆನ್‌ಲೈನ್ ಕಸ ವಿಲೇವಾರಿ ಸೇವೆ ಆರಂಭಿಸಿದೆ. ಜೋಮ್ಯಾಟೋ, ಸ್ವಿಗ್ಗಿ ಮಾದರಿಯಂತೆ, ಈ ಸೇವೆ ಮೂಲಕ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ಡೆಲಿವರಿ ಬಾಯ್ಸ್ ತಮ್ಮ ಮನೆಗೆ ಬಂದು ಕಸವನ್ನು ವಿಲೇವಾರಿ ಮಾಡುತ್ತಾರೆ.



ಬೈಕ್ ಮೂಲಕ ಸೇವೆ – ತಕ್ಷಣ ಸೇವೆಗೊಳಗಾಗುವ ಸುಲಭ ವಿಧಾನ


ಪ್ರಾಯೋಗಿಕ ಹಂತದಲ್ಲಿ 10 ಜನ ಡೆಲಿವರಿ ಬಾಯ್ಸ್‌ಗಳನ್ನು ತೊಡಗಿಸಿ, ಬೈಕ್ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಆರಂಭಿಸಲಾಗಿದೆ. ಈ ಡೆಲಿವರಿ ಬಾಯ್ಸ್ ಕಡಿಮೆ ಅವಧಿಯಲ್ಲಿ ಮನೆಗೆ ಬಂದು, ಕಸವನ್ನು ಬಾಚಿ ಕಸದ ಲಾರಿ ಅಥವಾ ಆಟೋಗೆ ವಿಲೇವಾರಿ ಮಾಡುತ್ತಿದ್ದಾರೆ.



ಆಧುನಿಕ ಆ್ಯಪ್ ಸೇವೆ – ಬುಕ್ಕಿಂಗ್ ಮಾಡಿದರೆ ಮನೆಯಲ್ಲೇ ಸೇವೆ


ಪಾಲಿಕೆ ಇದೀಗ ಆನ್‌ಲೈನ್ ಆ್ಯಪ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಿದೆ. ಬಾಡಿಗೆ ಮನೆಗಳಲ್ಲಿ ತಂಗಿರುವವರು, ನೌಕರಿಯ ಮಹಿಳೆಯರು ಹಾಗೂ ಬ್ಯಾಚುಲರ್ಸ್‌ಗಾಗಿ ಈ ಸೇವೆ ಬಹುಪಯೋಗಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.







ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಹೊಸ ಪರಿಹಾರ


ಈ ಹೊಸ ಪ್ರಯತ್ನದ ಮೂಲಕ ಬೀದಿಗಳಲ್ಲಿ ಕಸ ಎಸೆಯುವ ನಿಟ್ಟನ್ನು ತಡೆಯಲು ಪಾಲಿಕೆ ಸಜ್ಜಾಗಿದೆ. ಸಂಗ್ರಹಿತ ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಅಥವಾ ನಿಯೋಜಿತ ವಾಹನಗಳಿಗೆ ವರ್ಗಾಯಿಸಲಾಗುತ್ತಿದೆ.

Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ