LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೇಟೆ ಮಾಚಗೌಡನಹಳ್ಳಿಯ ರಂಗಭೂಮಿ ನಟ ರವಿಕುಮಾರ್ ಎಂ.ಜಿ

ಗೊರೂರು ಅನಂತರಾಜು, ಹಾಸನ. ಕಾಲಮಾನದ ಸುಳಿಯಲ್ಲಿ ನಶಿಸಿ ಹೋಗುತ್ತಿರುವ ರಂಗ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಹಾಸನ ಜಿಲ್ಲೆ  (Hassan District) ಅರಕಲಗೂಡು (Arakalagudu) ತಾಲ್ಲೂಕಿನ ಪೇಟೆಮಾಚಗೌಡನಹಳ್ಳಿಯ ಶ್ರೀ ರವಿಕುಮಾರ್ ರಂಗ (Ravikumar Ranga) ಸಂಘಟಕರು ಕಲಾವಿದರಾಗಿ ಗಮನ ಸೆಳೆಯುತ್ತಾರೆ. ಕಳೆದ 22 ವರ್ಷಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ಇವರು ಅರಕಲಗೂಡು ಶ್ರೀ ದೊಡ್ಡಮ್ಮದೇವಿ ಕಲಾಸಂಘದ ಮಾ. ಉಪಾದ್ಯಕ್ಷ ರಾಗಿರುತ್ತಾರೆ. ಶ್ರೀಯುತರು ರಂಗಮ್ಮ ಲೇಟ್ ಗೋವಿಂದೇಗೌಡ ದಂಪತಿಗಳ ಮಗನಾಗಿ ಜನಿಸಿ ಬಾಲ್ಯದಲ್ಲಿಯೇ ರಂಗಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಮಾಯಣ, ಮಹಾಭಾರತಕ್ಕೆ ಸಂಬ0ಧಿಸಿದ ನಾಟಕಗಳಲ್ಲಿ ಹಲವಾರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇವರು ಸಮರ್ಥ ಸಂಘಟಕರಾಗಿ ದೊಡ್ಡಮ್ಮದೇವಿ ಕಲಾಸಂಘವನ್ನು ;ಸ್ಥಾಪಿಸಿ ಜಿಲ್ಲೆ ರಾಜ್ಯಮಟ್ಟದ ಪೌರಾಣಿಕ ನಾಟಕೋತ್ಸವಗಳನ್ನು ನಡೆಸಿರುತ್ತಾರೆ. ಜೀವನ ನಿರ್ವಹಣೆಗಾಗಿ ಬೇಕರಿ ನಡೆಸುವ ಸದಾ ಕ್ರಿಯಾಶೀಲ ವ್ಯಕ್ತಿಯಾಗಿ ಇವರ ಸಾಧನೆಯ ಹಿಂದೆ ತಾಯಿ ರಂಗಮ್ಮ, ಪತ್ನಿ ಲತಾ ಮತ್ತು ಪುತ್ರ ರಾಕೇಶ್ ಮತ್ತು ಸ್ನೇಹಿತರ ಉತ್ತೇಜನ ಬಹಳಷ್ಟಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರು ಸತ್ಯವ್ರತ ಶನಿಮಹಾತ್ಮೆ ನಾಟಕದಲ್ಲಿ ಚಂದ್ರಹಾಸ, ಶನಿದೇವರು, ರಾಜವಿಕ್ರಮ ನಾಟಕದಲ್ಲಿ ವಿಕ್ರಮ, ಕುರುಕ್ಷೇತ್ರದಲ್ಲಿ ವಿಧುರ, ಕೃಷ್ಣ, ಅಭಿಮನ್ಯು, ಸತ್ಯ ಹರಿಶ್ಚಂದ್ರ ನಾಟಕದಲ್ಲಿ ಹರಿಶ್ಚಂದ್ರ, ಸೀತಾ ಸ್ವಯಂವರದಲ್ಲಿ ಲಕ್ಷö್ಮಣ, ನಳದಮಯಂತಿಯಲ್ಲಿ ದಮಯಂತಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ದಾನ ಶೂರ ಕರ್ಣ ನಾಟಕದಲ್ಲಿ ನಟಿಸಿದ್ದಾರೆ. ರವಿಕುಮಾರ್ ಎಂ.ಜಿ. ಉರುಫ್ ಬೇಕರಿ ರಾಜೇಗೌಡರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ರಂಗಭೂಮಿ ಯಲ್ಲಿ ನೀಡಿದ ಸೇವೆಯ ಹಿನ್ನಲೆಯಲ್ಲಿ ಬಾಬಾಸಾಹೇಆಬ್ ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಷಿಪ್ ಅವಾರ್ಡ್ 2023ರಲ್ಲಿ ಲಭಿಸಿದೆ.

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ 27-3-2010ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ವೀರಭದ್ರೇಶ್ವರಸ್ವಾಮಿ ಕಲಾ ಸಂಘ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಮ್ಮೆಯ ಕಲಾವಿದ ಪ್ರಶಸ್ತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅರಕಲಗೊಡು ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅರಕಲಗೊಡು ತಾಲ್ಲೂಕು ಕದಂಬ ಸೈನ್ಯೆ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್. ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ