LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಿ.ಕೆ ಎಸ್ ಅಶ್ವತ್ಥ್ ಅವರ ಪತ್ನಿ ಶ್ರೀಮತಿ.ಶಾರದಮ್ಮನವರ ನಿಧನ









BENGALURU : ಕನ್ನಡ ಚಿತ್ರರಂಗ ಬಹು ಜನಪ್ರಿಯ ನಟರಾಗಿದ್ದ ದಿ.ಕೆ ಎಸ್ ಅಶ್ವತ್ಥ್ ಅವರು ಯಾರಿಗೆ ತಾನೇ ತಿಳಿದಿಲ್ಲ. ಅವರ ಧರ್ಮ ಪತ್ನಿ ಶ್ರೀಮತಿ ಶಾರದಮ್ಮನವರು ಮಾತ್ರ ಬಂಧು ಬಳಗದವರಿಗೆ ಮಾತ್ರ ಪರಿಚಯವಿತ್ತು. 96 ವರ್ಷಗಳಾಗಿದ್ದ ಶ್ರೀಮತಿ.ಶಾರದಮ್ಮನವರು ಇಂದು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸುತ್ತೇನೆ.



ಒಂದು ಹಳೆಯ ಫೋಟೋ ಕೆ ಎಸ್ ಅಶ್ವತ್ಥ್ ಅವರ ಕುಟುಂಬದ್ದು ಹಂಚಿಕೊಂಡಿದ್ದೇನೆ. ಮೈಸೂರಿನ ಶಿವರಾಂಪೇಟೆಯ ದಿನಗಳು. ಶ್ರೀ.ಕೆ ಎಸ್ ಅಶ್ವತ್ಥ್ ಅವರು ಒಂದು ಟಾಂಗಾದಲ್ಲಿ ಬಹುತೇಕ ಒಂದು ಆನಂದ ಬಣ್ಣದ ಜುಬ್ಬಾ ಹಾಕಿಕೊಂಡು ಬಂದಿಳಿದರೆ ನಮಗೆಲ್ಲಾ ಸಂಭ್ರಮ. ಯಾವುದಾದರೂ ಕುಟುಂಬದ ಕಾರ್ಯಕ್ರಮಗಳು ನಡೆದಾಗ ಶ್ರೀಮತಿ.ಶಾರದಮ್ಮನವರು ಬಂದಾಗ ನನ್ನ ಅಮ್ಮನನ್ನು ಗುರುತಿಸಿ ಏನೇ ಪುಟ್ಟಿ ಹೇಗಿದ್ಯಾ ಅಂತ ಮಾತನಾಡಿಸುತ್ತಿದ್ದರು. ನಾವು ಶ್ರೀಮತಿ ಮತ್ತು ಶ್ರೀ.ಕೆ ಎಸ್ ಅಶ್ವತ್ಥ್ ದಂಪತಿಗಳ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಿದ್ದೆವು.



ಶ್ರೀ.ಕೆ ಎಸ್ ಅಶ್ವತ್ಥ್ ಅವರ ಕುಟುಂಬ ಸರಸ್ವತಿಪುರಂ ಬಡಾವಣೆಯ ಕಲಾಶ್ರೀ ಮನೆಗೆ ಬಂದ ನಂತರ ಅವರ ವಾಕಿಂಗ್, ಕೆಲವೊಮ್ಮೆ ಒಂದು ನಾಯಿಯ ಜೊತೆ ವಾಕಿಂಗ್, ಅವರ ವಾಕಿಂಗ್ ಸ್ಟಿಕ್ ಎಲ್ಲವನ್ನೂ ನೋಡಿದ ಮೈಸೂರಿನ ಜನರು ಅನೇಕ. ನಮ್ಮ ಸ್ಮಾರ್ತ ಉಲುಚುಕಮ್ಮೆ ಸಮುದಾಯ ಹೆಮ್ಮೆ ಇವರ ಕುಟುಂಬ. ಗತಕಾಲದ

ಮೈಸೂರಿನ ದಿನಗಳು ನಿಜಕ್ಕೂ ಗ್ರೇಟ್. ಹಿರಿಯರ ಕಣ್ಮರೆ ನಿಜಕ್ಕೂ ದುಃಖದ ಸಂಗತಿ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ.



























































Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ