LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Samyoga Kala Shala: ರಾಜಾಜಿನಗರ ಸಂಯೋಗ ಕಲಾ ಶಾಲೆಯ ಅರ್ಥಪೂರ್ಣ ವಾರ್ಷಿಕೋತ್ಸವ

ಬೆಂಗಳೂರು: ರಾಜಾಜಿನಗರದ ಸಂಯೋಗ ಕಲಾ ಶಾಲೆಯು (Rajajinagar Samyoga Kala Shala) ತನ್ನ ಆರನೆಯ ವಾರ್ಷಿಕೋತ್ಸವವನ್ನು (anniversary) ಮಲ್ಲೇಶ್ವರದ ಸೇವಾ ಸದನದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಸಂಸ್ಥೆಯ (Classical Music School) ಮುಖ್ಯಸ್ಥೆ ಜ್ಯೋತಿ ಭಿಡೆ ಅವರ ತಾಯಿ ಶ್ರೀಮತಿ ಸಾವಿತ್ರಮ್ಮ ಮತ್ತು ಇತರ ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ನಾಲ್ಕು ವರ್ಷದ ಮಕ್ಕಳಿಂದ ಹಿರಿಯರವರೆಗೆ ಇರುವ ಜ್ಯೋತಿ ಅವರ ಶಿಷ್ಯವರ್ಗ, ತಾವು ಕಲಿತಿರುವ ಸಂಗೀತವನ್ನು ಪ್ರದರ್ಶಿಸಿದರು.



ಮುಖ್ಯ ಅತಿಥಿಗಳಾಗಿ ಅನನ್ಯ ಸಂಸ್ಥೆಯ ಡಾ. ಆರ್.ವಿ. ರಾಘವೇಂದ್ರ, ವಿದುಷಿಗಳಾದ ಡಾ. ರಾಗಿಣಿ ಸನತ್ ಮತ್ತು ಆರ್. ಲಲಿತಾರವರು ಮಾತನಾಡಿ ಮಕ್ಕಳಿಗೆ ಪ್ರೋತ್ಸಾಹದಾಯಕ ಹಿತವಚನಗಳನ್ನು ನೀಡಿದರು. ನಂತರ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ರಶ್ಮಿ ಹೆಗಡೆ ಅವರ ಶಿಷ್ಯರು ಪ್ರಸ್ತುತಪಡಿಸಿದ ರಂಜನಿ ಮಾಲ, ಶ್ರೀ ಜಯದೇವ ವಿರಚಿತ ದಶಾವತಾರದ ರಚನೆ ಮತ್ತು ಕೃಷ್ಣನ ಕುರಿತ ರಚನೆಯು ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.



ಕೊನೆಯಲ್ಲಿ ಈ ಹಿಂದೆ ವಿ.ಆರ್. ಲಲಿತಾ ಅವರು ನಡೆಸಿದ್ದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಕಾರ್ಯಗಾರದಲ್ಲಿ ಭಾಗವಹಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆರಭಿ ರಾಗದ ಸಾಧಿಂಚನೆ ಮತ್ತು ಶ್ರೀ ರಾಗದ ಎಂದರೋ ಮಹಾನುಭಾವಲು ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು.



ಪಕ್ಕವಾದ್ಯಗಳಲ್ಲಿ ಎಸ್ ಶಶಿಧರ್ (ಪಿಟೀಲು), ಎನ್. ಎಸ್. ಕೃಷ್ಣಪ್ರಸಾದ್ (ಮೃದಂಗ), ಪರಶುರಾಮ್ (ಕೀ-ಬೋರ್ಡ್), ದೇವಕಿಚಂದ್ರ (ರಿದಂ ಪ್ಯಾಡ್) ಮತ್ತು ಪುಟ್ಟರಾಜು (ತಬಲಾ) ಅವರು ಒಳ್ಳೆಯ ಸಾಥ್ ನೀಡಿದರು.


ಸಂಸ್ಥೆಯು ಇನ್ನೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲಿ ಎಂದು ಎಲ್ಲ ಪ್ರೇಕ್ಷಕರು ಹರಸಿದರು.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ