ತುಮಕೂರು: ಕೆಂಪೇಗೌಡ ಜಯಂತಿಗೆ ಆಹ್ಮಾನಿಸಿಲ್ಲ ಎಂದು ಜೆಡಿಎಸ್ ಮುಖಂಡ ಎಸ್ ಆರ್ ಗೌಡ ಹಾಗೂ ಬೆಂಬಲಿಗರು ತಹಶೀಲ್ದಾರ್ ಸಚ್ಚಿದಾನಂದಗೆ ತೀವ್ರ ತರಾಟೆ ತೆಗೆದುಕೊಂಡ ತುಮಕೂರಿನಲ್ಲಿ ಶುಕ್ರವಾರ ಘಟನೆ ನಡೆದಿದೆ,
ಕಾರ್ಯಕ್ರಮ ಆರಂಭವಾಗುತ್ತಲೇ ವೇದಿಕೆಗೆ ಆಗಮಿಸಿದ ಎಸ್ ಆರ್ ಗೌಡ ತಹಶೀಲ್ದಾರ್ ರನ್ನು ತರಾಟೆಗೆ ತೆಗೆದುಕೊಂಡಿದ್ದು, ಕೆಂಪೇಗೌಡ ಜಯಂತಿಯನ್ನು ಕೆಲವು ಪಕ್ಷದ ಕೆಲ ಮುಖಂಡರಿಗೆ ಮಾತ್ರ ಸೀಮಿತ ಮಾಡಿಕೊಂಡಿದ್ದೀರಾ ಅಂತಾ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದ್ದಾರೆ,
ತುಮಕೂರಿನ ಸಿರಾ ತಲ್ಲಾಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ನ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅಧ್ಯಕ್ಷತೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯುತ್ತಿತ್ತು, ಈ ವೇಳೆ ವೇದಿಕೆಯ ಬಳಿ ಬಂದ ಜೆಡಿಎಸ್ ಮುಖಂಡರು ಈ ತಾರತಮ್ಯಕ್ಕೆ ಶಾಸಕ ಜಯಚಂದ್ರ ಅವರೇ ಸ್ಪಷ್ಟನೆ ಕೊಡಬೇಕು ಎಂದು ಮುಖಂಡರು ಪಟ್ಟು ಹಿಡಿದಿದ್ದು, ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ ಈ ವೇಳೆ ಗುಪ್-ಚುಪ್ ಆಗಿ ಕುಳಿತ ಘಟನೆಯೂ ನಡೆಯಿತು, ಬಳಿಕ ತಹಶೀಲ್ದಾರ್ ಸಾರ್ವಜನಿಕರ ಎದುರಿನಲ್ಲಿ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದರು,