ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾ ವಾಚಸ್ಪತಿ ಶ್ರೀ ಶ್ರೀ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದoಗಳವರು ದಿವ್ಯ ಸಾನಿಧ್ಯ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಯನ್ ಸಂಸ್ಥೆ ಉತ್ತಮ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ, ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ,
ಇದರ ಜೊತೆಗೆ ನಾಡಿನ ಹೆಸರಾಂತ ಕನ್ನಡ ಹಬ್ಬವನ್ನು ಈ ದಿನ ಹಮ್ಮಿಕೊಂಡಿರುವುದು ಸಂತೋಷದ ವಿಚಾರ
ಈ ಕನ್ನಡ ರಾಜ್ಯೋತ್ಸವ ಹಬ್ಬ ನವಂಬರ್ ತಿಂಗಳಿಗೆ ಸೀಮಿತವಾಗದೆ 367 ದಿನವೂ ಕನ್ನಡವನ್ನು, ಕನ್ನಡದ ನೆಲ, ಜಲವನ್ನು ನೆನೆಸಿಕೊಳ್ಳುವ ದಿನವಾಗಬೇಕೆಂದು ಕರೆ ನೀಡಿದರು.

ಲಯನ್ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಜಿಲ್ಲಾ ಸಂಯೋಜಕರಾದ ನಾಗರಾಜ್ ಶೆಟ್ಟಿ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪರಾಜ್ಯಪಾಲರಾದ ರಾಜು ಚಂದ್ರಶೇಖರ್, ಆರ್. ಕೆ. ಹೆಗಡೆ, ಗೌರಿ ಕೃಷ್ಣರಾಜ್, ಮಂಜುನಾಥ್. ಜಿ.
ಲಯನ್ ಜಿಲ್ಲಾ ಪದಾಧಿಕಾರಿಗಳು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ಲಯನ್ ಜಿಲ್ಲಾ ಪಿ.ಆರ್. ಓ.
ಜಿ.ಎಸ್. ಮಂಜುನಾಥ್ ತಿಳಿಸಿರುತ್ತಾರೆ.