LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈಚಾರಿಕ ಸಾಹಿತ್ಯಕ್ಕೆ ಕನ್ನಡದಲ್ಲಿ ಮಾನ್ಯತೆ ಸಿಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಕಾಸರವಳ್ಳಿ

ಕನ್ನಡ ಪುಸ್ತಕ  ಓದುವವರು ಇಲ್ಲ ಅನ್ನುತ್ತಿರುವ ಮಾತುಗಳು ಕೇಳಿಬರುತ್ತಿರುವಾಗಲೇ ಪ್ರಕಾಶಕರು ವೈವಿದ್ಯಮಯ ಪುಸ್ತಕವನ್ನು ಪ್ರಕಟಿಸುತ್ತಲೇ ಇದ್ದಾರೆ. ಇದರಿಂದ  ಒಂದು ಆರೋಗ್ಯಕರ ಬೆಳವಣಿಗೆ ಆಗಿದೆ. ಮೊದಲಿನಿಂದಲೂ ಸೃಜನಶೀಲ ಸಾಹಿತ್ಯಕ್ಕೆ ನೀಡಿದ ಮಹತ್ವ ವೈಚಾರಿಕ ಸಾಹಿತ್ಯಕ್ಕೆ ಸಿಗುತ್ತಿಲ್ಲ ಎನ್ನುವ ಸಕಾರಣವಾದ ಆರೋಪ ಕೇಳಿಬರುತ್ತಿತ್ತು. ಈಗ ಸಂತೋಷದ ಸಂಗತಿ ಎಂದರೆ ಸೃಜನೇತರ ವೈಚಾರಿಕ ಸಾಹಿತ್ಯಗಳು ಪ್ರಕಟವಾಗುತ್ತಿವೆ. ಸಾಕಷ್ಟು ಮಾನ್ಯತೆ ಸಿಗುತ್ತಿದೆ ಎಂದು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಅಂತರರಾಷ್ಟ್ರಿಯ ಖ್ಯಾತಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ ತಿಳಿಸಿದರು.


ಇಂದು ಲೋಕಾರ್ಪಣೆಗೊಂಡಿರುವ ಪುಸ್ತಕಗಳು ಹಳತು ಹೊಸತು ಎರಡು ತಲೆಮಾರಿನವರು ಇವೆ. ಇಂದು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಬಾನುಮುಷ್ತಾಕ್‌ ಅವರಿಂದ ಮಾನ್ಯತೆ ದೊರೆತಿರುವುದು ಸಂತೋಷ, ಇಂತಹ ಸಂತೋಷ ಕನ್ನಡಕ್ಕೆ ನಿರಂತವಾಗಿರಲು ಇನ್ನಷ್ಟು ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್‌ಗೆ ಅನುವಾದ ಆಗಬೇಕೆಂದು ಕಾಸರವಳ್ಳಿ ಅಭಿಪ್ರಾಯ ಪಟ್ಟರು


ಮುಖ್ಯ ಅತಿಥಿಯಾಗಿದ್ದ ಶ್ರೀ ಜೋಗಿಯವರು  ಎಲ್ಲಾ ಪುಸ್ತಕಗಳನ್ನು ಪರಿಚಯಿಸಿ ಇಂದು ಬಿಡುಗಡೆಯಾದ 15 ಪುಸ್ತಕಗಳು ವಿಭಿನ್ನ ಪುಸ್ತಕಗಳು ಪ್ರಕಟವಾಗಿರುವುದು ಒಳ್ಳೇಯ ಬೆಳವಣಿಗೆ.  ಪುಸ್ತಕಗಳ ಬೆಳವಣಿಗೆ ಹುಲುಸಾಗಿದೆ ಆದರೆ ಓದುಗರು ಒಂದು ವಯೋಮಾನಕ್ಕೆ ನಿಂತಿದೆ. ಈಗ ಲೇಖಕರ ಜವಾಬ್ದಾರಿ ಹೆಚ್ಚಿದ್ದು. ಓದುಗರ ನಿರಂತರ ಸಂಪರ್ಕ ಬೆಳೆಸುವುದು ಮಾತನಾಡುವುದು ಕಾಣಿಸಿಕೊಳ್ಳುವುದು ಮುಖ್ಯವಾಗಿದ್ದು ಜೊತೆಗೆ ಇಂದಿನ ಕಾಲಮಾನಕ್ಕೆ ಪ್ರಸ್ತತವಾಗಿರುವ ಹೊಸ ಸಾಮಾಜಿಕ ಮಾಧ್ಯಮಗಳಿಗೆ ತೆರೆದುಕೊಳ್ಳಬೇಕೆಂದರು.

ಸಮಾರಂಭದಲ್ಲಿ ಡಾ. ಡಿ. ವಿ. ಗುರುಪ್ರಸಾದ್‌, ಡುಂಡಿರಾಜ್‌, ನಾಗತಿಹಳ್ಳಿ ಜಯಪ್ರಕಾಶ್‌ ತಮ್ಮ ಕೃತಿಗಳ ಕುರಿತು ಮಾತನಾಡಿದರು. ಎಂ. ಕೆ. ಇಂದಿರಾ ಅವರ ಪುತ್ರ ಮಂಜುನಾಥ್‌ ಸಭೆಯಲ್ಲಿ ಹಾಜರಿದ್ದರು.


ಸಮಾರಂಭದಲ್ಲಿ ಸಪ್ನ ಬುಕ್‌ ಹೌಸ್‌ ನಿತಿನ್‌ ಷಾ ಸ್ವಾಗತಿಸಿದರು. ಆರ್.‌ ದೊಡ್ಡೆಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯಸಾಹಿತಿಗಳು ಉಪಸ್ಥಿತರಿದ್ದರು.


VK NEWS DIGITAL :


Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ