LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

*ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನೂ ಹೇರ ಬೇಡಿ -ಡಾ, ಗೀತಾ ರಾಮಾನುಜಾಮ್.*

ಬೆಂಗಳೂರು : ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನೂ ಹೇರದೇ ಅವರಿಗೆ ಉತ್ತಮಸಂಸ್ಕಾರ ಯುತವಾದ ಶಿಕ್ಷಣ ನೀಡಿ ಎಂದು ಪೋಷಕರಿಗೆ ಕ್ಯಾತ ಶಿಕ್ಷಣ ತಜ್ಞೆ ಡಾ, ಗೀತಾ ರಾಮಾನುಜಾಮ್ ಕರೆ ನೀಡಿದರು.
ಅವರು ನಾಟ್ಯ ಸನ್ನಿಧಿ ಭರತನಾಟ್ಯ ಕಲಾಶಾಲೆಯ ನೃತ್ಯಗುರು ಡಾ, ಮೋನಿಷಾ ನವೀನ್ ಅವರ ಸಾರಥ್ಯದಲ್ಲಿ ಕಲಾಗ್ರಾಮದ ಸಮುಚ್ಚಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟ್ಯ ಸಂಭ್ರಮ 2025ರಲ್ಲಿ ಪಾರ್ವತಿ ಕಲ್ಯಾಣ ನೃತ್ಯ ರೂಪಕಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಮಕ್ಕಳು ಗಳಿಸುವ ಅಂಕಗಳನ್ನು ನೋಡದೆ ಅವರಲ್ಲಿ ಹುದುಗಿರುವ ಕಲಾಪ್ರತಿಭೆ, ಸಂಸ್ಕಾರ ವನ್ನು ಗುರ್ತಿಸಿ ಅವರನ್ನು ಪ್ರೋತ್ಸಾಹಿಸಿ ಎಂದರು,
ಇನ್ನೊಬ್ಬರ ಮುಂದೆ ಎಂದಿಗೂ ನಿಮ್ಮ ಮಕ್ಕಳನ್ನು ತೆಗೆಳುವುದು ಹೀಯಾಳಿಸುವುದನ್ನು ಮಾಡಬೇಡಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷ್ ರಾವ್ ಮಾತನಾಡಿ 15ನೇ ಶತಮಾನದಲ್ಲಿ ನಿರ್ಮಾಣವಾದ ಲೇಪಾಕ್ಷಿ ದೇವಾಲಯದಲ್ಲಿ ಅಸಂಪೂರ್ಣ ಕಲ್ಯಾಣ ಮಂಟಪದಲ್ಲಿ ವಶೀಷ್ಟ ಮಹರ್ಷಿ ಶಿವಪಾರ್ವತೀಯರ ಕಲ್ಯಾಣ ಶಿಲ್ಪಗಳು, ಮೈನಾದೇವಿ, ಹಿಮವಂತರು ಪಾರ್ವತಿ ಕಲ್ಯಾಣದಲ್ಲಿ ಹೆಣ್ಣುಒಪ್ಪಿಸುವ ಶಿಲ್ಪಕಲಾಕೃತಿಗಳಿರುವ ಕುರಿತು ಪ್ರೇಕ್ಷಕರಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲಾಪ್ರೋತ್ಸಾಹಕ ಹಿರಿಯ ಪತ್ರಕರ್ತ ಎನ್.ಎಸ್. ಸುಧೀಂದ್ರ ರಾವ್ ವಹಿಸಿ ಮಾತನಾಡಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕೆಲ ಸಣ್ಣ ಪುಟ್ಟ ಲೋಪ ದೋಷ ವಿದ್ದರು ಅದು ಪ್ರೇಕ್ಷಕರ ಗಮನಕ್ಕೆ ಬಾರದೆ ಇರುವಂತೆ ಅದ್ಭುತವಾಗಿ ಅಭಿನಯಿಸಿ ಸಭಿಕರ ಮೆಚ್ಚುಗೆ ಗಳಿಸಿದರು. ಕಲಿಕೆಗೆ ಮಿತಿಎಂಬುದು ಇಲ್ಲ ಅದು ಸಾಗರದಂತೆ ಮೊಗೇದಷ್ಟು ಮತ್ತಷ್ಟು ಎಂಬತ್ತೆ ಇರುತ್ತೆ ಎಂದರು.
ಪಾರ್ವತಿ ಕಲ್ಯಾಣ ನೃತ್ಯ ರೂಪಕವಂತು ಅಮೋಘ ರಂಗಸಚ್ಚಿಕೆ, ವಸ್ತ್ರವಿನ್ಯಾಸ, ಪಾತ್ರಕ್ಕೆ ತಕ್ಕ ಪ್ರಸಾದನ ದೊಂದಿಗೆ ಕೂಡಿ ಕಳೆಕಟ್ಟಿತು, ದಕ್ಷ ಯಜ್ಞದಲ್ಲಿ ಶಿವನನ್ನು ಅವಮಾನಿಸುವುದು, ಸಚಿದೇವಿ ಅಗ್ನಿ ಪ್ರವೇಶ, ಮರು ಜನ್ಮದಲ್ಲಿ ಪಾರ್ವತಿ ಬಾಲ್ಯ, ಶಿವನಿಗಾಗಿ ತಪಸ್ಸು ಆಚರಿಸುವುದು, ಮದುವೆಯ ಸಂಪ್ರದಾಯ ದಂತೆ ಗೌರಿ ಪೂಜೆ, ಕಾಶಿಯಾತ್ರೆ, ಅಂತರಪಟ, ಧಾರೆಯರೆಯುವುದು, ಮಾಂಗಲ್ಯಧಾರಣೆ, ಸಪ್ತಪದಿ, ಉಂಗುರ ತೆಗೆಯುವುದು, ಅತಿಥಿಯರಿಗೆ ಭೂರಿ ಭೋಜನ, ಉಡುಗೊರೆ, ಹೆಣ್ಣು ಒಪ್ಪಿಸುವುದು ಸೇರಿದಂತೆ ವಿವಾಹ ವಿಧಿ ವಿಧಾನಗಳನ್ನು ಸುಂದರವಾಗಿ ನೃತ್ಯ ರೂಪಕದಲ್ಲಿ ಮೂಡಿಬಂತು.
ಕಾರ್ಯಕ್ರಮ ಆರಂಭದಲ್ಲಿ ವಾದ್ಯ ಗುರು ಯಶೋಧಕೃಷ್ಣ ನೇತೃತ್ವದಲ್ಲಿ ಮಕ್ಕಳ ಕೀ ಬೋರ್ಡ್ ವಾದನ ಮನಸೆಳೆಯಿತು,ನಟ್ಟುವಾoಗದಲ್ಲಿ ಮೋನಿಷಾ ನವೀನ್, ಹಾಡುಗರಿಕೆಯಲ್ಲಿ ಭಾರತಿ ವೇಣುಗೋಪಾಲ್, ಕೊಳಲಲ್ಲಿ ಡಾ, ಸ್ಕಂದಕುಮಾರ್, ಮೃದಂಗದಲ್ಲಿ ವೇಣುಗೋಪಾಲ್, ರಿತಮ್ ಪ್ಯಾಡ್ ನಲ್ಲಿ ವೆಂಕಟೇಶ ಸಾಗರ ಕಲಾವಿದರಿಗೆ ಸಹಕಾರ ನೀಡಿದರು.
ಎಲ್ಲಾ ಗಣ್ಯರಿಗೆ ಹಾಗು ಕಲಾವಿದರಿಗೆ, ಪ್ರಶಸ್ತಿ ಪತ್ರ, ಪಾರಿತೋಷಕ ನೀಡಿ ಸನ್ಮಾನಿಸಲಾಯಿತು,
ಕಾರ್ಯಕ್ರಮದಲ್ಲಿ ವಚನ ಜ್ಯೋತಿ ಬಳಗದ ಪಿನಾಕಪಾಣಿ, ಸಹಕಾರ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಎನ್ ಶಂಕರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ಉಷಾ ಬಸಪ್ಪ, ನೃತ್ಯ ಗುರು ದರ್ಶಿನಿ ಮಂಜುನಾಥ್, ದೂರದರ್ಶನದ ಉಪನಿರ್ದೇಶಕ ಕೆ. ಸತೀಶ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮಂಗಳಬಾಲಚಂದ್ರ ಮಾಡಿದರೆ ಪ್ರಾರ್ಥನೆಯನ್ನು ಶಾಲಿನಿ ಸುಧೀಂದ್ರ ಮಾಡಿದರು ವಂದನಾರ್ಪಣೆ ಯನ್ನು ಹೇಮಾವತಿಹನುಮಂತಯ್ಯ ಮಾಡಿದರು.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ