LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟ್ರಂಪ್ ಮಾತಿಗೆ ಬಗ್ಗಿದ ಕೋಕಾ-ಕೋಲಾ!

ವಾಷಿಂಗ್ಟನ್: ಜಾಗತಿಕವಾಗಿ ತಂಪು ಪಾನೀಯಕ್ಕೆ ಹೆಸರುವಾಸಿಯಾಗಿರುವ ಕೋಕಾ-ಕೋಲಾ ಈಗ ತನ್ನ ಉತ್ಪನ್ನಗಳಿಗೆ ಕೃತಕ ಸಕ್ಕರೆಯ ಬದಲು ನೈಜ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ, ತಮ್ಮ ಸಲಹೆಯ ಮೇರೆಗೆ ಕೋಕಾ-ಕೋಲಾ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದ್ದು, ಇದು ಒಳ್ಳೆಯ ನಡೆ ಎಂದು ಟ್ರಂಪ್ ಕಂಪನಿಯನ್ನು ಶ್ಲಾಘಿಸಿದ್ದಾರೆ,
ಟ್ರುತ್ ಸೋಷಿಯಲ್‍ನಲ್ಲಿ ಬರೆದಿರುವ ಟ್ರಂಪ್ ನಾನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೋಕ್ ಪಾನೀಯದಲ್ಲಿ ನಿಜವಾದ ಕಬ್ಬಿನ ಸಕ್ಕರೆಯನ್ನು ಬಳಸುವ ಬಗ್ಗೆ ಕೋಕಾ-ಕೋಲಾ ಕಂಪನಿ ಜೊತೆ ಮಾತನಾಡುತ್ತಿದ್ದೇನೆ, ನನ್ನ ಸಲಹೆಯನ್ನು ಕಂಪನಿ ಕೂಡಾ ಒಪ್ಪಿಕೊಂಡಿದೆ, ಕೋಕಾ-ಕೋಲಾದ ನಿರ್ಧಾರಕ್ಕೆ ನಾನು ಅದರ ಅಧಿಕಾರದಲ್ಲಿರುವ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ಇದು ಕಂಪನಿಯ ಒಂದು ಉತ್ತಮ ಕ್ರಮವಾಗಿದೆ, ಮುಂದೆ ಈ ಪಾನೀಯ ಇನ್ನು ಉತ್ತಮವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ,
ಕತೂಹಲಕಾರಿಯಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಕೋಕಾ-ಕೋಲಾ ಮೇಲಿನ ಒಲವು ಬಹಳಷ್ಟು ವರ್ಷಗಳ ಹಿಂದಿನಿಂದಲೂ ಇದೆ, ಈ ವರ್ಷ ಜನವರಿ 15 ರಂದು ಟ್ರಂಪ್ ತಮ್ಮ ಅಧಿಕಾರ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಡಯಟ್ ಕೋಕ್ ನ ಸಂಶೋಧನೆ ಶ್ಲಾಘಿಸಿದ್ದರು, ಇಬ್ಬರು ಕೋಕ್ ಮೇಲಿನ ಒಲವನ್ನು ವ್ಯಕ್ತಪಡಿಸಿದ್ದರು,
ಇಷ್ಟು ಮಾತ್ರವಲ್ಲದೇ ಮಸ್ಕ್ ಕೋಕಾ-ಕೋಲಾ ಸಿಇಒ ಜೇಮ್ಸ್ ಕ್ವಿನ್ಸಿ ಅವರೊಂದಿಗೆ ಟ್ರಂಪ್ ಅವರು ಇರುವ ಫೋಟೋವನ್ನು ಹಂಚಿಕೊಂಡಿದ್ದರು, ಅವರು ಟ್ರಂಪ್ ಅವರಿಗೆ ಸ್ಮರಣಾರ್ಥವಾಗಿ ಡಯಟ್ ಕೋಕ್ ನ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದರು,
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ