LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಾಲಿ ಜನಾರ್ದನ ರೆಡ್ಡಿ – ಬಿ. ಶ್ರೀರಾಮುಲು ಮತ್ತೆ ಒಂದಾದರು: ಕೊಪ್ಪಳದಲ್ಲಿ ಬಿಜೆಪಿಗೆ ಒಗ್ಗಟ್ಟಿನ ಸಂದೇಶ

ಕೊಪ್ಪಳ, ಜುಲೈ 21
ಸಂಡೂರು ಉಪಚುನಾವಣೆ ಬಳಿಕ ಉದ್ಭವಿಸಿದ್ದ ಅಂತರಕಲಹದ ವಾತಾವರಣ ಇದೀಗ ಶಮನಗೊಂಡಿದ್ದು, ಬಿಜೆಪಿಯ ಹಿರಿಯ ನಾಯಕರು ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಮತ್ತೆ ಒಂದಾದ ದೃಷ್ಯ ಕೊಪ್ಪಳ ಜಿಲ್ಲೆಯ ಮರಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕಾಣಸಿಕ್ಕಿದೆ.


ಭಾನುವಾರ ನಡೆದ ಬಿಜೆಪಿ ಅವಲೋಕನಾ ಸಭೆಯಲ್ಲಿ ಇಬ್ಬರೂ ನಾಯಕರೂ ಒಂದೇ ವೇದಿಕೆಯಲ್ಲಿ ಭಾಗವಹಿಸಿ, ತಮ್ಮ ನಡುವಿನ ವೈಮನಸ್ಸಿಗೆ ತೆರೆ ಹಾಕಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದರು. ಸಭೆ ಮೋದಿಯವರ 11 ವರ್ಷಗಳ ಸಾಧನೆಗೆ ಸಮರ್ಪಿತವಾಗಿತ್ತು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವ ನೀಡಿದರು.


ವಿಜಯೇಂದ್ರ ಅವರು ಎರಡೂ ನಾಯಕರ ಕೈ ಹಿಡಿದು, ಪಕ್ಷದ ಏಕತೆಗೂ, ಸಹಕಾರಕ್ಕೂ ಪ್ರೇರಣೆ ನೀಡಿದರು. ಈ ವೇಳೆ ರೆಡ್ಡಿ ಮತ್ತು ಶ್ರೀರಾಮುಲು ಅಕ್ಕಪಕ್ಕದಲ್ಲಿ ಕುಳಿತು ಮಾತನಾಡಿದರು.


ನಮ್ಮದು ಸ್ನೇಹದ ಜಗಳ" – ಜನಾರ್ದನ ರೆಡ್ಡಿ
ರೆಡ್ಡಿ ಮಾತನಾಡುತ್ತಾ, "ನಮ್ಮ ನಡುವೆ ಮಧ್ಯಸ್ಥಿಕೆ ಬೇಕು ಎಂದು ಯಾರುಕಾದರೂ ಯೋಚಿಸುತ್ತಿದ್ದರೆ ಅದು ಮೂರ್ಖತನ. ನಮ್ಮದು ಸ್ನೇಹದ ಜಗಳ. ಇದರಿಂದ ಲಾಭ ಪಡೆಯಲು ಯತ್ನಿಸಿದವರಿಗೆ ಏನೂ ಸಿಗಲ್ಲ," ಎಂದು ಸ್ಪಷ್ಟಪಡಿಸಿದರು.


"ಕಾಂಗ್ರೆಸ್ ಮಾದರಿಯ ಕುಲಕುಟುಮ ಕಾಲವಲ್ಲ" – ಶ್ರೀರಾಮುಲು
ಶ್ರೀರಾಮುಲು ಅವರು, "ಪಕ್ಷದ ವಿಚಾರ ಬಂದಾಗ ನಾವು ಮಾದರಿಯಾಗಬೇಕು. ಎಲ್ಲರೂ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ಜನಾರ್ದನ ರೆಡ್ಡಿಯವರೊಂದಿಗೆ ನನಗೆ ಯಾವುದೇ ವೈಷಮ್ಯವಿಲ್ಲ," ಎಂದು ಭರವಸೆ ನೀಡಿದರು.


ಪಕ್ಷ ಬೇರಿನಿಂದ ಗಟ್ಟಿ ಮಾಡೋಣ – ವಿಜಯೇಂದ್ರ ಕರೆ
ಸಭೆಯಲ್ಲಿದಂತೆ ವಿಜಯೇಂದ್ರ ಅವರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ, “ಪಕ್ಷವನ್ನು ಗಟ್ಟಿ ಮಾಡುವ ಕೆಲಸ ನೆಲಮಟ್ಟದಿಂದ ಪ್ರಾರಂಭಿಸೋಣ,” ಎಂದು ಕರೆ ನೀಡಿದರು.

Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ