ಬೆಂಗಳೂರು: ನಗರದ ಆರ್ ಎಂ ವಿ (RMV Layout) ಬಡಾವಣೆಯಲ್ಲಿರುವ ಕೇಶವ ಕಬ್ಬಡಿ ಕ್ರೀಡಾಂಗಣದಲ್ಲಿ ಇಂದು, ಮುಂಬರುವ ಡಿಸೆಂಬರ್ ತಿಂಗಳ 25, 26, 27 ಹಾಗೂ 28 ರಂದು ಆನೇಕಲ್ (Anekal) ನಲ್ಲಿ ನಡೆಯಲಿರುವ ಕರ್ನಾಟಕ ಡಿಸ್ಟ್ರಿಕ್ಟ್ ಚಾಂಪಿನ್ಶಿಪ್ (Karnataka District kabaddi ChampionShip) ಕಬ್ಬಡಿ ಪಂದ್ಯಾವಳಿಗಳಿಗೆ ಇಂದು ಸೀನಿಯರ್ ಗ್ರೂಪ್ ಗೆ ಕಬ್ಬಡಿ ಆಟಗಾರರ ಆಯ್ಕೆ ನಡೆಯಿತು. ಸುಮಾರು 56 ಆಕಾಂಕ್ಷಿಗಳ ಪೈಕಿ 24 ಜನರನ್ನು ಮೊದಲ ಸುತ್ತಿಗೆ (ಹಿರಿಯರ ಗುಂಪಿಗೆ) ಆಯ್ಕೆ ಮಾಡಲಾಗಿದ್ದು, 20 ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಅಂತಿಮ ಘಟ್ಟಕ್ಕೆ 14 ಜನರನ್ನು ಆಯ್ಕೆ ಮಾಡಲಾಗುವುದೆಂದು ನಗರ ಜಿಲ್ಲಾ ಅಮೇಚರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಹೆಚ್. ಎಲ್. ನಾರಾಯಣಸ್ವಾಮಿ ಅವರು ಮಾಹಿತಿಯನ್ನು ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಕೆ ಆರ್ ಎ ಕೆ ಎ ರೆಫರೀ ಬೋರ್ಡ್ ಅಧ್ಯಕ್ಷರು ಶ್ರೀ ಷಣ್ಮುಗಂ ಎಂ., ಕಬಡ್ಡಿ ತರಭೇತುದಾರರಾದ ಶ್ರೀ ಮಹೇಶ್, ಕಬ್ಬಡಿಯ ರಾಷ್ಟ್ರೀಯ ತರಭೇತುದಾರರಾದ ಶ್ರೀ ಶಿವಲಿಂಗಪ್ಪ, ರಾಜ್ಯ ಕಬ್ಬಡಿ ಅಸೋಸಿಯೇಷನ್ ಬೆಂಗಳೂರು ಅರ್ಬನ್ ಪ್ರಧಾನ ಕಾರ್ಯದರ್ಶಿ
ಶ್ರೀ ಆರ್. ಶೇಖರ್, ಶ್ರೀ ವಿವೇಕಾನಂದ ಶೆಟ್ಟಿ, ಶ್ರೀ ಜಿ.ಟಿ. ಮುನಿರಾಜು, ಶ್ರೀ ಸಿದ್ದರಾಜು ಹಾಗೂ ಇನ್ನಿತರರು ಆಯ್ಕೆ ಪ್ರಕ್ರಿಯೆಯಲ್ಲಿ ಇಡೀ ದಿನ ಭಾಗವಹಿಸಿದ್ದರು.