*ಬೃಹತ್ ಪ್ರತಿಭಟನಾ ರ್ಯಾಲಿ* ಫ್ರೀಡಂ ಪಾರ್ಕ್ ಚಲೋ *ಅಕ್ಟೋಬರ್ 1, 2024, ಮಂಗಳವಾರ*

VK NEWS
By -
0

*ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ*

*ಅಕ್ಟೋಬರ್ 1, 2024, ಮಂಗಳವಾರದಂದು *ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್* 

ಭಾರತ ದೇಶಕ್ಕೆ ಜಾತಿ ವ್ಯವಸ್ಥೆ ಎಂಬುದು ಶತ ಶತಮಾನಗಳಿಂದ ಕಾಡುತ್ತಿರುವ ಭೂತವಾಗಿದೆ. ಮನುವಾದಿಗಳು ಕುತಂತ್ರದಿಂದ ಸಹಸ್ರಾರು ವರ್ಷಗಳಿಂದ ಮನುಷ್ಯರ ನಡುವೆ ಮೇಲು ಕೀಳು ಎಂಬ ಅಮಾನವೀಯ ಸಾಮಾಜಿಕ ಸ್ಥರಗಳನ್ನು ನಿರ್ಮಿಸಿ 6000ಕ್ಕೂ ಅಧಿಕ ಜಾತಿಗಳನ್ನಾಗಿ ವಿಭಜಿಸಿ ಈ ಸಮಾಜವನ್ನು ಎಂದೆಂದಿಗೂ ಒಂದಾಗದಂತೆ ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಸರಿಪಡಿಸುವಲ್ಲಿ ಭಗವಾನ್ ಬುದ್ದ, ವಿಶ್ವಗುರು ಬಸವಣ್ಣ, ಕನಕದಾಸ, ನಾರಯಣಗುರು, ಜ್ಯೋತಿ ಬಾ ಫುಲೆ , ಸಾವಿತ್ರಿ ಬಾ ಫುಲೆ, ತಂದೆ ಪೆರಿಯಾರ್,ವಿಶ್ವಜ್ಞಾನಿ ಬೋಧಿಸತ್ವ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್, ಛತ್ರಪತಿ ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಕವಿ ಕುವೆಂಪುರವರಂತಹ ಮಹಾನಿಯರು ಬದುಕಗಳನ್ನೇ ಮೀಸಲಿಟ್ಟು ಶ್ರಮಿಸಿದ್ದಾರೆ. ಇವುಗಳ ಒಟ್ಟಾರೆ ಪ್ರಯತ್ನದ ಫಲವಾಗಿ ಇಂಡಿಯಾದಂತ ದೇಶದಲ್ಲಿ 4500 ಸಾವಿರ ವರ್ಷಗಳಿಗೂ ಹಿಂದಿನ ಜಾತಿ ವ್ಯವಸ್ಥೆಗೆ ಹಂತ ಹಂತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 9000ಕ್ಕೂ ಅಧಿಕ, 700ಕ್ಕೂ ಅಧಿಕ ಭಾಷೆ ಮತ್ತು ಉಪಭಾಷೆ ಹಾಗೂ ಸಾವಿರಾರು ಸಂಸ್ಕೃತಿ ಮತ್ತು ಉಪ ಸಂಸ್ಕೃತಿಗಳನ್ನು ಒಳಗೊಂಡ ಅತ್ಯುನ್ನತ ಮಾನವೀಯ ಸಂವೇದನಶೀಲ ಸಂವಿಧಾನವನ್ನು ಬಾಬಾಸಾಹೇಬರು ಭಾರತ ದೇಶದ ಜನತೆಗೆ ಅರ್ಪಿಸಿದ್ದಾರೆ. ಮೇಲೆ ಹೇಳಲಾದ ಮಹಾನೀಯರ ಕನಸಿನ ಭಾರತ ಇನ್ನಾದರೂ *ಮುನಿರತ್ನ ನಾಯ್ಡುನಂತಹ ನೀಚ ಹೊಲಸು ಮನಸ್ಸುಗಳ ಮೂಲಕ ಕಷ್ಟಸಾಧ್ಯವಾಗುತ್ತಿದೆ* .

*13/09/2024ರಂದು ಸಾಮಾಜಿಕ ಜಾಲತಾಣಗಳಲ್ಲಿ ಆoಧ್ರದ ಚಿತ್ತೂರಿನಿಂದ ವಲಸೆ ಬಂದಿರುವ ಕೊಳಕು ಶಾಸಕ ಮುನಿರತ್ನ ಮಾತನಾಡಿರುವ ಆಡಿಯೋ ಬಹಿರಂಗಗೊಂಡಿತು. ಈ ಧ್ವನಿಮುದ್ರಣದಲ್ಲಿ ಮಹಿಳೆಯರು ಒಳಗೊಂಡಂತೆ ಪರಿಶಿಷ್ಟ ಮತ್ತು ಒಕ್ಕಲಿಗ ಸಮುದಾಯಗಳ ಬಗ್ಗೆ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ಅಶ್ಲೀಲ ಮತ್ತು ಅಸಭ್ಯವಾಗಿ ಬೈದಿರುವುದು ರಾಜ್ಯದ 7ಕೋಟಿ ಪ್ರಜ್ಞಾವಂತ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿದೆ* .

ಇತ್ತೀಚಿನ ದಿನಮಾನಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಭವಿಷ್ಯ ಭಾರತದ ಆತಂಕವನ್ನು ಹೆಚ್ಚಿಸುತ್ತಿದೆ. ಸಂವಿಧಾನದ ಅಡಿಯಲ್ಲಿ ಎಲ್ಲಾ ಸಮುದಾಯಗಳ ಮತಗಳನ್ನು ಗಳಿಸಿ ಸರ್ವ ಸಮುದಾಯಗಳ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಅಹಂಕಾರಿ ಶಾಸಕ ಮುನಿರತ್ನನ ನಡೆಯನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ಖಂಡಿಸಬೇಕಿದೆ. ಇದು ಕೇವಲ ಕೆಲ ಸಮುದಾಯಗಳನ್ನು ಗುರಿಯಾಗಿಸಿರುವುದು ಮಾತ್ರವಲ್ಲ ಆಡಿಯೋ ಪ್ರಕರಣ ಹೊರಬೀಳುತಿದ್ದಂತೆ ಅತ್ಯಾಚಾರ, ಹನಿ ಟ್ರಾಪ್ , ಹೆಚ್ ಐವಿ ಸೋಂಕಿತರ ಮೂಲಕ ರಾಜಕೀಯ ವಿರೋಧಿಗಳನ್ನು ಹಣೆಯಲು ಜೈವಿಕ ಯುದ್ದ ( Bio war ) ನಂತಹ ನೀಚ ಅಸ್ತ್ರಗಳನ್ನು ಪ್ರಯೋಗ ಮಾಡಲು ಮುಂದಾಗಿದ್ದ ಆರೋಪಗಳ ಅಡಿಯಲ್ಲಿ ಮತ್ತೆ ಬಂದನಕ್ಕೆ ಒಳಗಾಗಿದ್ದಾನೆ. ಇನ್ನೂ ಇವನ ನೀಚ ಕೃತ್ಯಗಳು ನೂರಾರು ಸಂಖ್ಯೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿವೆ. ಅತ್ಯಂತ ಕೆಟ್ಟ ವ್ಯಕ್ತಿತ್ವ ಮತ್ತು ಚರಿತ್ರೆ ಉಳ್ಳ ನೀಚ ರಾಜಕಾರಣಿಯಿಂದ ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತಿದೆ.  

ಇದರಿಂದಾಗಿ ಅಕ್ಟೋಬರ್ 1ರ ಮಂಗಳವಾರದಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗೆ ಕರೆ ನೀಡಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ತನಕ ಸಾಗುವ ಈ ಬೃಹತ್ ರ್ಯಾಲಿಯಲ್ಲಿ ಲಕ್ಷಾಂತರ ಸಂವಿಧಾನ ಪರ ಮನಸ್ಸುಗಳು ಭಾಗವಹಿಸಿ ರ್ಯಾಲಿ ಯಶಸ್ವಗೊಳಿಸಲು ಒಕ್ಕೂಟ ಮನವಿ ಮಾಡುತ್ತಿದೆ.

*ಪ್ರತಿಭಟನೆಯ ಹಕ್ಕೊತ್ತಾಯಗಳು* 

 *1. ಮುನಿತ್ನನನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು*

 *2ಅಕ್ರಮವಾಗಿ ಗಳಿಸಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು*

 *3. ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು*

*4. ಜಾತಿ ನಿಂದನೆಯ ಕಾನೂನನ್ನು ಇನ್ನಷ್ಟು ಬಲಪಡಿಸಬೇಕು*

5. ⁠ಮುನಿರತ್ನನಿಗೆ ರಾಜಕೀಯ ಬಹಿಷ್ಕಾರ ಹಾಕಬೇಕು

Post a Comment

0Comments

Post a Comment (0)