ಭಾರತ 'ಫ್ರಾಜೈಲ್ ಫೈವ್'ನಿಂದ ಜಗತ್ತಿನ ಟಾಪ್ ಫೈವ್ ಆರ್ಥಿಕತೆಯಾಗಿ ಹೊರಹೊಮ್ಮಿದೆ : ಅಮಿತ್ ಶಾ

VK NEWS
By -
0

ಮುಂಬೈ: ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ ಮುಂಬೈನಲ್ಲಿ ನಡೆದ ಇಂಡಿಯಾ ಗ್ಲೋಬಲ್ ಫೋರಂನ ವಾರ್ಷಿಕ ಹೂಡಿಕೆ ಶೃಂಗಸಭೆ - NXT10 ಅನ್ನು ಉದ್ದೇಶಿಸಿ ಮಾತನಾಡಿದರು ಸಂದರ್ಭದಲ್ಲಿ, 'ಮೋದಿ ನಾಯಕತ್ವದಲ್ಲಿ ಭಾರತ ದುರ್ಬಲ ಅರ್ಥಿಕತೆಯಿಂದ ವಿಶ್ವದ ಐದನೇ ಆರ್ಥಿಕತೆಯಾಗಿ ಹೊರಹೊಮ್ಮಿದೆಎಂದು ಶಾ ಸುಸ್ಪಷ್ಟಪಡಿಸಿದರು.

2004 ರಿಂದ 2014 ರವರೆಗೆ ಕೇಂದ್ರದಲ್ಲಿ ಸೋನಿಯಾಮನಮೋಹನ್ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕತೆಯುವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು ಎಂಬುದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತಿಳಿದಿದೆಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ತರುವ ಕಾರ್ಯ ಮಾಡಿದೆತಮ್ಮ ಮೂರನೇ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ಮೋದಿಯವರು ಮೂರನೇ ಸ್ಥಾನಕ್ಕೆ ತರುವುದು ಖಚಿತ. 2014 ಹಿಂದಿನ 10 ವರ್ಷಗಳವರೆಗೆ ದೇಶದ ಆರ್ಥಿಕತೆಯ ಸ್ಥಿತಿ ಹದಗೆಟ್ಟಿತ್ತುಹೂಡಿಕೆದಾರರ ವಿಶ್ವಾಸ ಕುಸಿದಿತ್ತುಆದರೆ ಇಂದಿನ ಅಮೃತ ಕಾಲಘಟ್ಟದಲ್ಲಿ ದೇಶದ ಆರ್ಥಿಕತೆಯು ಬಲಿಷ್ಠವಾಗಿದೆ ಮತ್ತು ಭಾರತವು ಆತ್ಮ ವಿಶ್ವಾಸದಿಂದ ಎದ್ದನಿಂತು  ಸ್ವಾವಲಂಬಿಯಾಗಿದೆ.


ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು 'ಅಂತ್ಯೋದಯ'(ಕೊನೆಯ ಹಂತದ ವ್ಯಕ್ತಿಯ ಉನ್ನತಿರಾಜಕಾರಣಕ್ಕೆ ಹೆಸರಾಗಿರುವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು 'ನಿಷ್ಕ್ರಿಯ'ತೆಯಿಂದ ಎದ್ದು 'ಚಲನಶೀಲ'ವಾಗಿದೆ.'ರಿಗ್ರೆಸಿವ್'ನಿಂದ 'ಪ್ರೊಗ್ರೆಸಿವ್'ಗೆ ಬದಲಾಗಿರುವ ಭಾರತದ ಆರ್ಥಿಕತೆಯು 'ದುರ್ಬಲಸ್ಥಾನದಿಂದ  ಅಗ್ರ ಸ್ಥಾನಕ್ಕೆ ತಲುಪಿದೆಭಾರತವು ಈಗ ದುರ್ಬಲ ಐದು ಆರ್ಥಿಕತೆ ಹಣೆಪಟ್ಟಿಯಿಂದ ಹೊರಬಂದುಅಗ್ರ ಐದು ಆರ್ಥಿಕತೆಗಳ ಪಟ್ಟಕ್ಕೆ ತಲುಪಿದೆಹೊಸ  ಜಾಗತಿಕ ಭೂಪಟದಲ್ಲಿ ಭಾರತವು 'ಡಾರ್ಕ್ ಸ್ಪಾಟ್ನಿಂದ 'ಬ್ರೈಟ್ ಸ್ಪಾಟ್ಆಗಿ ಹೊರಹೊಮ್ಮಿದೆ. 10 ವರ್ಷಗಳಲ್ಲಿ ಸರ್ಕಾರವು ನೋಟು ಅಮಾನ್ಯೀಕರಣಜಿಎಸ್ಟಿಜನ್ ಧನ್ತ್ರಿವಳಿ ತಲಾಖ್ಹೊಸ ಶಿಕ್ಷಣ ನೀತಿಸಿಎಎವಿಧಿ 370 ಮತ್ತು 35 ನಾರಿ ಶಕ್ತಿ ವಂದನ್ ಅಧಿನಿಯಮ್ಮೂರು ಹೊಸ ಕಾನೂನುಗಳುರಾಮಮಂದಿರ ನಿರ್ಮಾಣಹೊಸ ಸಂಸತ್ತಿನ ಕಟ್ಟಡಕರ್ತಾರ್ಪುರ ಕಾರಿಡಾರ್ ನಿರ್ಮಾಣಈಶಾನ್ಯಕಾಶ್ಮೀರ ಮತ್ತು ಎಡಪಂಥೀಯ ಉಗ್ರವಾದದ ಮೇಲೆ ನಿಯಂತ್ರಣಗೃಹೋಪಯೋಗಿ ವಿದ್ಯುತ್ಅನಿಲ ಮತ್ತು ನೀರು, ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆರೈತರಿಗೆ ಆರ್ಥಿಕ ನೆರವುಸರ್ಜಿಕಲ್ ಸ್ಟ್ರೈಕ್ವೈಮಾನಿಕ ದಾಳಿ ಮತ್ತು ಇನ್ನೂ ಅನೇಕ ನಿರ್ಧಾರಗಳು  ಸೇರಿದಂತೆ 50 ಕ್ಕೂ ಹೆಚ್ಚು ಪರಿವರ್ತಕ ನಿರ್ಧಾರಗಳನ್ನು ತೆಗೆದುಕೊಂಡಿದೆಇವು ಭಾರತಕ್ಕೆ ವಿಶ್ವದಲ್ಲಿ ಹೊಸ ಗುರುತನ್ನು ನೀಡಿದೆ.




ಇಂದಿನ ಅಮೃತ ಕಾಲಘಟ್ಟದಲ್ಲಿ. 2024 ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆಮೋದಿ ಸರ್ಕಾರದ ಸಾಧನೆಗಳೊಂದಿಗೆ ಭಾರತೀಯ ರಾಜಕಾರಣದ ಚಾಣಕ್ಯ ಚುನಾವಣಾ ಸಮರದಲ್ಲಿ ಪ್ರತಿಪಕ್ಷಗಳಿಗೆ ನಿರ್ಣಾಯಕ ಸೋಲು ನೀಡಲು ಮತ್ತೊಮ್ಮೆ ರಣರಂಗಕ್ಕೆ ಇಳಿದಿದ್ದಾರೆಕಳೆದ 10 ವರ್ಷಗಳ ಸಾಧನೆಯನ್ನು ಆಧರಿಸಿ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಿರ್ಧರಿಸಿದೆಶಾ ಚುನಾವಣಾ ಕಣಕ್ಕೆ ಇಳಿದರೆ ಕಮಲ ಅರಳುವುದು ಖಚಿತ ಎಂಬುದು ವಿರೋಧ ಪಕ್ಷಗಳಿಗೂ ಗೊತ್ತಿದೆಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಭಾರತೀಯ ಜನತಾ ಪಕ್ಷದ ಅಸಾಮಾನ್ಯ ನಾಯಕ ಶಾ ಅಸ್ತ್ರವೊಂದಿದ್ದರೆ ಸಾಕು.

Post a Comment

0Comments

Post a Comment (0)